ಹೆಬ್ರಿ: ನಗರದ ಜವುಳಿ ಉದ್ಯಮಿಯೊಬ್ಬರನ್ನು ಬೆದರಿಸಿ ಹಫ್ತಾ ವಸೂಲಿ ಪ್ರಯತ್ನ ನಡೆಸುತ್ತಿದ್ದ ಭೂಗತ ಪಾತಕಿ ಕಲಿ ಯೋಗೀಶ್ ಸಹಚರರಿಬ್ಬರನ್ನು ಕಾರ್ಕಳ ಎಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಹೆಬ್ರಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಾರ್ಕಳದ ನತಿನ್ (23) ಹಾಗೂ ಬಂಟ್ವಾಳ ಬಾಳೆಕುಳಿಯ ಅಬೂಬಕ್ಕರ್ ಸಿದ್ಧಿಕಿ (26) ಬಂಧಿತರು. ಅವರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೇ 17ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆ ಹಿನ್ನೆಲೆ: ಆರೋಪಿಗಳು ಸೋಮವಾರ ಬೆಳಗ್ಗೆ ಹೆಬ್ರಿಯ ಉದ್ಯಮಿಯೊಬ್ಬರ ಮನೆಗೆ ತೆರಳಿ ಪಿಸ್ತೂಲ್ ತೋರಿಸಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದಾದ ಕೆಲವೇ ನಮಿಷಗಳಲ್ಲಿ ಮಾಹಿತಿಯನ್ನಾಧರಿಸಿ ಹೆಬ್ರಿ ಪೊಲೀಸ್ ಠಾಣಾಧಿಕಾರಿ ಸೀತಾರಾಮ್ ನೇತೃತ್ವದ ತಂಡ ಆರೋಪಿಗಳ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಯಿತು.

ಆರೋಪಿ ಅಬೂಬಕ್ಕರ್ ಸಿದ್ಧಿಕ್ ಕಲಿ ಯೋಗೀಶ್ ಸಹಚರನಾಗಿದ್ದು, ಈಗಾಗಲೇ ಹಲವಾರು ಹಫ್ತಾ ವಸೂಲಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ ಹಲವಾರು ಕೇಸು ದಾಖಲಾಗಿದೆ. ಇನ್ನೊಬ್ಬ ಆರೋಪಿ ಕಲಿ ಯೋಗೀಶ್ ಸಹಚರ ನತಿನ್ ಕಾರ್ಕಳ ಸಮೀಪದ ಮಾಳದವನಾಗಿದ್ದು, ಈತನ ಮೇಲೂ ಹಲವಾರು ಪ್ರಕರಣಗಳು ದಾಖಲಾಗಿದ್ದು ಪೊಲೀಸರಿಗೆ ಬೇಕಾದವನಾಗಿದ್ದಾನೆ

By suddi9

Leave a Reply

Your email address will not be published. Required fields are marked *