ಕೈಕಂಬ: ದೀಪಾವಳಿ ಹಬ್ಬದಂದು ಗೋಪೂಜೆ ,ಲಕ್ಷ್ಮೀಪೂಜೆ, ಬಲಿಯೇಂದ್ರಪೂಜೆ, ಅಂಗಡಿಪೂಜೆ ಈಗೆ ಹಲವು ವಿಧದಲ್ಲಿ ತುಳುನಾಡಿನ ಸಾಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ ಗುರುಪುರ ಕೈಕಂಬ ಹೋಟೆಲ್ ಉದ್ಯಮಿ ಮಾಲಕ ಜಗದೀಶ್ ಇವರು ವಿಶಿಷ್ಠ ರೀತಿಯಲ್ಲಿ ಅಂಗಡಿಪೂಜೆಯನ್ನು ಆಚರಿಸಿದ್ದಾರೆ.ಬೆಳಗ್ಗೆ ಗಣಹೋಮ ಮಾಡಿ ನಂತರ ಸಂಜೆ ಮಟ್ಟಿ ಕಾಲಬೈರವೇಶ್ವರ ಭಜನಾ ಮಂಡಳಿಯವರಿಂದ ಭಜನೆ ಮಾಡುವ ಮೂಲಕ ದೇವರನ್ನು ಭಕ್ತಿಯಿಂದ ಭಜಿಸಿದರು.
ದೇವಲೋಕ ವಿಶ್ವರೂಪಸೌದದ ಮಾಲಕ ವಿಶ್ವನಾಥ ಚೌಟ ದೀಪ ಬೆಳಗಿಸಿ ಉದ್ಘಾಟಿಸಿ ಒಂದೆರಡು ಭಜನೆ ಹಾಡುವ ಮೂಲಕ ನೆರದ ಜನರಿಗೆ ಉತ್ಸಾಹ ತುಂಬಿದರು. ಈ ಕಾರ್ಯಕ್ರಮಕ್ಕೆ ಸ್ವಾಗತ್ ಹೋಟೆಲ್ ಮಾಲಕ ಜಗದೀಶ್, ಪ್ರವೀಣ್, ನೂರಾರು ಹೋಟೇಲ್ ಗ್ರಾಹಕರು ಭಾಗವಹಿಸಿದರು.






