ಬಂಟ್ವಾಳ: 2015-16ನೇ ಸಾಲಿನ 30-54 ಜಿ.ಪಂ. ಯೋಜನೆಯಲ್ಲಿ ಮಂಜೂರಾದ ರೂ. 2ಲಕ್ಷ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಸಾರ್ವಜನಿಕ ಹಿಂದೂ ರುದ್ರಭೂಮಿ ರಸ್ತೆಗೆ ಕಾಂಕ್ರೀಟಿಕರಣದ ಗುದ್ದಲಿಪೂಜೆಯನ್ನು ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ ನೆರವೇರಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ, ಮಾಜಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಅಮ್ಟಾಡಿ ಗ್ರಾ. ಸಮಿತಿ ಅಧ್ಯಕ್ಷ ಜಯ ಕೋಟ್ಯಾನ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಯೋಗೀಶ್ ಸುವರ್ಣ, ಮೋಹಿನಿ, ರತಿ ಭಂಡಾರಿ ಮತ್ತು ಪ್ರಮುಖರಾದ ಸದಾನಂದ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ವಿಜಯ, ಶ್ರೀನಿವಾಸ ಭಂಡಾರಿ, ನರಸಿಂಹ ಹೊಳ್ಳ, ಪ್ರಮೋದ್ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು
