ಉಳ್ಳಾಲ. ಸೆ,02: ಕರ್ನಾಟಕ ರಾಜ್ಯದ ನೂತನ ಗೃಹಸಚಿವರಾಗಿ ನೇಮಕಗೊಂಡ ಡಾ| ಜಿ ಪರಮೇಶ್ವರ್ ಅವರನ್ನು ಬೆಂಗಳೂರು ಅಲ್ಲಿನ ಕೆಪಿಸಿಸಿ ಕಛೇರಿಯಲ್ಲಿ ಮಂಗಳೂರು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಯ ವತಿಯಿಂದ ಅಧ್ಯಕ್ಷ ಹಾಜಿ ಯು.ಎಸ್ ಹಂಝ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ ಅವರು ಭೇಟಿಯಾಗಿ ಸನ್ಮಾನಿಸಿ ಶುಭಾರೈಸಿದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರಾವಳಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಸೂಕ್ತ ಕಾನೂನು ವ್ಯವಸ್ಥೆ ಕೈಗೊಳ್ಳಿವಂತೆ ಕೋರಿದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಜೆ.ಅಬ್ದುಲ್ ಹಮೀದ್, ಟ್ರಸ್ಟ್ ಕಾರ್ಯದರ್ಶಿ ಫಾರೂಕ್ ಉಪಸ್ಥಿತರಿದ್ದರು.
