ಬಂಟ್ವಾಳ: ದಾರಿ ಯಾವುದಯ್ಯ ಮುಂದೆ ಸಾಗಲು ದಾರಿ ತೋರಿಸಯ್ಯ ದೇವಾ | ಇದು ವಾಹನ ಸವಾರರ ಹಾಡು. ಇಲ್ಲಿ ರಾತ್ರಿ ಹೊತ್ತಲ್ಲಿ ವಾಹನ ಸವಾರರು ಚಾಲನೆ ಮಾಡಬೇಕಾದರೆ ಸಾಹಸವೇ ಮಾಡಬೇಕು. ಒಂದು ಚೂರು ಕಣ್ಣು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.ಇದು ಬಂಟ್ವಾಳ- ಮೂಡಬಿದ್ರೆ ಸಂಪರ್ಕ ರಸ್ತೆಯ ಕುರಿಯಾಳ ತಿರುವಿನಲ್ಲಿನ ಕಥೆ .
ರಸ್ತೆಯ ಎರಡು ಬದಿಗಳಲ್ಲಿ ಹಚ್ಚ ಹಸಿರಿನ ಬಳ್ಳಿಯ ರಾಶಿ, ತಿರುವು ಮುರುವು ರಸ್ತೆ. ಸೊಂಪಾಗಿ ಬೆಳೆದಿರುವ ಹಸಿರು ಬಳ್ಳಿಗಳು ಪ್ರಯಾಣಿಕರ ಕಣ್ಣಿಗೆ ತಂಪು ನೀಡಿದರೂ ವಾಹನ ಚಾಲಕರ ಪಾಲಿಗೆ ಕಾದಿದೆ ಪ್ರಾಣಕ್ಕೆ ಕಂಟಕ


