ಕೈಕಂಬ: ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಸೆ.20ರಂದು ಭಾನುವಾರ ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಬೆಳಗ್ಗೆ 8.30ಕ್ಕೆ ಕಲಶ ಪ್ರತಿಷ್ಠೆ, 9.15ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 2ರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಶ್ರೀಧರ್ ಆಚಾರ್ಯ ಇವರ ಸಾರಥ್ಯದಲ್ಲಿ “ಮೋಕೆದ ಕಲಾವಿದೆರ್” ಸುಂಕದಟ್ಟೆ ಇವರು ಪ್ರಸ್ತುತಪಡಿಸುವ ತುಳು ಹಾಸ್ಯ ಸಾಮಾಜಿಕ ನಾಟಕ “ಪೊರ್ಲು ತೂಪೆರ್” ನಡೆಯಿತು.



