ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಗುಂಡಿಕುಮೇರ್ ಬಸ್ಸು ನಿಲ್ದಾಣದ ಉದ್ಘಾಟನೆಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ರಕ್ಷಿತ್ ಉದ್ಘಾಟಿಸಿದರು.


ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯ ತುಂಬೆ ಪ್ರಕಾಶ್ಚಂದ್ರ ಶೆಟ್ಟಿ, ಕರಿಯಂಗಳ ಗ್ರಾ. ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಪುಂಚಮೆ ಚಂದ್ರಶೇಖರ ರಾವ್, ಮಾಜಿ ತಾ.ಪಂ.ಸದಸ್ಯ ವೆಂಕಟೇಶ್ ನಾವಡ ಮಾಜಿ ಕರಿಯಂಗಳ ಗ್ರಾ.ಪಂ.ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ವೀಣಾ ಆಚಾರ್ಯ,ಪಂಚಾಯತ್ ಸದಸ್ಯರಾದ ಗೋಪಾಲ ಕ್ರಷ್ಣ ಶೆಟ್ಟಿ, ಕಿಶೋರ್ ಕುಮಾರ್, ಸ್ಥಳೀಯರಾದ ಉಮೇಶ್ ಆಚಾರ್ಯ ಚಂದ್ರಹಾಶ ಪಲ್ಲಿಪಾಡಿ, ಗುಂಡಿಕುಮೇರ್ ಅಬ್ಬಾಸ್ ಬಸೀರ್ , ರಾಜು ಕೊಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.




