“ಪಾಠದ ಜೊತೆಗೆ ಆಟ” – ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಮಕ್ಕಳಿಗೆ ಕೆಸರುಗದ್ದೆ ಆಟ.
ಶಾಲೆಯಲ್ಲಿ ಪಾಠದ ಜೊತೆಗೆ ಆಟ ಆಡಿಸುವ ಮೂಲಕ ಮಕ್ಕಳಲ್ಲಿ ಚೈತನ್ಯ ಶಕ್ತಿ ಹೆಚ್ಚಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು ಶ್ರೀರಾಮ ವಿದ್ಯಾಲಯ ಕಲ್ಲಡ್ಕ ಕಾರ್ಯ ಇತರ ಶಾಲೆಗಳಿಗೆ ಮಾದರಿ ಆಗಿದೆ.
ಶಾಲೆಯ ಮಕ್ಕಳಲ್ಲಿ ಸಹಜವಾಗಿ ದೈಹಿಕ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿದೆ. ಉತ್ಸಾಹದಿಂದ ಆಟದ ಜೊತೆಗೆ ಪಾಠ ಆಲಿಸುತ್ತಿದ್ದಾರೆ. ಕ್ರೀಡೆಯಲ್ಲಿ ಮಕ್ಕಳು ತೋರಿದ ಆಸಕ್ತಿ ಅವರ ಪ್ರಗತಿಗೆ ಶಾಲೆಯ ಕೀರ್ತಿಗೆ ಸಹಕಾರಿ ಆಗಿದೆ.
ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆಸರು ಗದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಚಿತ್ತರಂಜನ್ ಹೊಸಕಟ್ಟ ಮತ್ತು ಪ್ರಭೋಧ ವಾಣಿಜ್ಯ ಸಂಘವನ್ನು ರಾಜೀವ ಸಪಲ್ಯ ಮತ್ತು ಆನಂದ ಶೆಟ್ಟಿ ಇವರುಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಪ್ರಭಾಕರ ಭಟ್, ಯತೀನ್ ಕುಮಾರ್ ಏಳ್ತಿಮಾರ್, ಗಂಗಾ ಮಾತಾಜಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರು ವಸಂತ ಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲರು ಕೃಷ್ಣಪ್ರಸಾದ್, ಹಾಗೂ ಉಪನ್ಯಾಸಕರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

























