ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀರಾಜರಾಜೇಶ್ವವರೀ ಅಮ್ಮನವರ ಗರ್ಭಗುಡಿಯ ನವೀಕರಣಕ್ಕೆ ಅಗತ್ಯವುಲ್ಲ ಕಾರ್ಕಾಳ ದಿಂದ ಜು.13ರಂದು ಸೋಮವಾರ “ಶಿಲೆ ಕಲ್ಲು” ತರಲಾಯಿತು.

ಶಿಲಾಕಲ್ಲನ್ನು ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ವಿವೇಕಾನಂದ ರಸ್ತೆಯ ಮೂಲಕ ಹಾದು ಸಾವಿರಾರು ಭಕ್ತಾಧಿಗಳೊಂದಿಗೆ ಬ್ಯಾಂಡ್, ವಾದ್ಯ,ಸೆಕ್ಷೊಪೋನ್, ನಾಶಿಕ್ಬ್ಯಾಂಡ್ ನೊಂದಿಗೆ ವಿಜ್ರಂಭನೆಯಿಂದ ಮೆರವಣೆಗೆಯಲ್ಲಿ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ರಾಜೇಶ್ ನಾಕ್ ಉಳಿಪಾಡಿಗುತ್ತು, ಕೃಷ್ಣರಾಜ ಮಾರ್ಲ ಮುತ್ತೂರು, ಉಳಿಪಾಡಿಗುತ್ತು ಉದಯ ಆಳ್ವ, ಸೇಸಪ್ಪಕೋಟ್ಯಾನ್ ಪಚಿನಡ್ಕ, ಅಮ್ಮುಂಜೆ ಗುತ್ತು ಮುಂಡಪ್ಪ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಅಮ್ಮಂಜೆಗುತ್ತು, ವಿದ್ಯಾಚರಣ್ ಭಂಡಾರಿ ಮುಗೇರ್ ಗುತ್ತು, ಬಂಟ್ವಾಳ ಸಂಘಚಾಲಕ ಶ್ರೀಮಾನ್ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸೋಮಶೇಖರ ಶೆಟ್ಟಿ ಕೀಣ್ಯ, ಫರಂಗಿಫೇಟೆ ಕೃಷ್ಣಕುಮಾರ್ ಪೂಂಜ ,ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ, ದೇವ್ ದಾಸ್ ಶೆಟ್ಟಿ ಅಮ್ಮುಂಜೆಗುತ್ತು, ದೋಗು ಪೂಜಾರಿ ಮಟ್ಟಿ, ಕರಿಯಂಗಳ ಗ್ರಾಮಪಂಚಾಯತಿ ಅಧ್ಯಕ್ಷೆ ಚಂದ್ರಿಕಾ ಹಾಗೂ ಪೊಳಲಿ ಸಾವಿರ ಸೀಮೆಯ ಭಕ್ತಾಧಿಗಳು ಮೇರವಣಿಗೆಯ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೊಳಲಿ ದೇವಳದ ತಂತ್ರಿಗಳಾದ ವೆಂಕಟೇಶ ತಂತ್ರಿ ದೇವಳದ ಪ್ರಧಾನ ಅರ್ಚಕ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಶಿಲಾ ಕಲ್ಲಿಗೆ ಪೂಜೆ ನೆರವೇರಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಇದರ ಗುತ್ತಿಗೆಯನ್ನು ಮಹಬಲ ಶೆಟ್ಟಿ ಪಲ್ಲಮಜಲು ವಹಿಸಿಕೊಂಡಿದ್ದರು. ಕಾರ್ಕಳದ ಶಿಲ್ಪಿ ಕುಪ್ಪಸ್ವಾಮಿ ಹಾಗೂ ನುರಿತ ಶಿಲ್ಪಿಗಳಿಂದ ಗರ್ಭಗುಡಿಯ ನವೀಕರಣವನ್ನು ಕೈಗೆತ್ತಿಕೊಂಡಿದ್ದಾರೆ ಸುಮಾರು ಮೂರು ತಿಂಗಳಿನೊಳಗೆ ಶಿಲ್ಪಿ ಕೆತ್ತನೆಯನ್ನು ಮಾಡಿ ಕೊಡುವುದಾಗಿ ಈಸಂದರ್ಭದಲ್ಲಿ ನುಡಿದರು. ಇವರಿಗೆ ದೇವಳದ ವತಿಯಿಂದ ಪ್ರಸಾದ ನೀಡಿದರು.


























