ಪಲ್ಲಿಪಾಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವಜ್ರಕಾಯ ಶಾಖೆ ಇದರ ಜಂಟಿ ಆಶ್ರಯದಲ್ಲಿ ಗುರುಪೂಜೆ ಜೂ.30 ಮಂಗಳವಾರ ವಿಠೋಭಾ ಬಾಲ ಭಜನಾ ಮಂದಿರ ಪಲ್ಲಿಪಾಡಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ ವಹಿಸಿದ್ದರು.
ಆರ್ಎಸ್ಎಸ್ ಬೌಧಿಕ್ ಮಂಗಳೂರು ಪ್ರಮುಕ್ ಸುರೇಶ್ ಪರ್ಕಳ, ಬಂಟ್ವಾಳ ತಾಲೂಕು ಸಂಪರ್ಕ ಪ್ರಮುಕ್ ಸಂದೀಪ್ ತೆಂಕಬೆಳ್ಳೂರು, ಪ್ರಕಾಶ್ ಬೆಳ್ಳೂರು,ಜಯಂತ ಮಣಿಕಂಠಪುರ ವಿಠೋಭಾ ಬಾಲ ಭಜನಾ ಮಂದಿರದ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಶಾಖೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

