ಬಂಟ್ವಾಳ : ವೈಯುಕ್ತಿಕ, ಸಾಮಾಜಿಕ, ಜಾಗತಿಕ ಆರೋಗ್ಯದ ದೃಷ್ಠಿಯಿಂದ ಸುರಕ್ಷಿತ ಆಹಾರದ ಸೇವನೆ ಅಗತ್ಯ ಎಂದು ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಶ್ರೀಮತಿ ರಮಾಶಂಕರ್ ಸಿ ಹೇಳಿದರು. ಅವರು ಶಾಲೆಯಲ್ಲಿ ನಡೆದ ‘ವಿಶ್ವ ಆರೋಗ್ಯ ದಿನ’ ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
DSC01271
ವಿದ್ಯಾರ್ಥಿಗಳು ಸಮೂಹ ಗಾಯನ, ಭಾಷಣ ಹಾಗೂ ನಾಟಕಗಳ ಮೂಲಕ ಆಹಾರ ಸಂರಕ್ಷಣೆಯ ಅಗತ್ಯತೆಯನ್ನು ತಿಳಿಸಿದರು. 9ನೇ ತರಗತಿಯ ರೆನಿಟಾ ಮರಿಯಾ ಸ್ವಾಗತಿಸಿ, ನಿಶಾಂತ್ ಅಂಚನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *