ವಿಕ ಸುದ್ದಿಲೋಕ ಕೈಕಂಬ
ನೂರುಲ್ ಇಸ್ಲಾಂ ಮದರಸ ಹಾಗೂ ಮಸ್ಜಿದ್ಗೆ ಶಿಲಾನ್ಯಾಸ ಕಾರ್ಯಕ್ರಮವು ಕೈಕಂಬ ಕಂದಾವರ ಮೂಡಕೆರೆಯಲ್ಲಿ ನಡೆಯಿತು. ದುವಾಃ ಹಾಗೂ ಶಿಲಾನ್ಯಾಸ ನೇತೃತ್ವವನ್ನು ಉಡುಪಿ, ಚಿಕ್ಕಮಗಳೂರು, ಹಾಸನ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ನೆರವೇರಿಸಿದರು. ಗೌರವಾಧ್ಯಕ್ಷರಾದ ಬಹು| ಯು.ಕೆ. ಯೂಸುಫ್ ಸಅದಿ ಕಂದಾವರ, ಆಲಿಯಬ್ಬ ಹಾಜಿ ಮೇಗಿನಮನೆ, ಇಬ್ರಾಹಿಂ, ಅಧ್ಯಕ್ಷರಾದ ಮುಹಮ್ಮದ್, ಶೆರೀಫ್ ಉಪಸ್ಥಿತರಿದ್ದರು.

ಗಣ್ಯ ವ್ಯಕ್ತಿಗಳಾಗಿ, ಬದ್ರುದ್ದೀನ್ ಆಝ್ಹರಿ ಕೈಕಂಬ, ವೆಝ್ಸ್ ಅಬ್ದುಲ್ಲಾ, ರಿಯಾಜ್ ಸಅದಿ ಗುರುಪುರ, ಎಂ.ಎಸ್. ಖಾದರ್, ಅಬ್ದುಲ್ ರಹಿಮಾನ್ ಕೋಯ ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
