ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಗ್ಗ ವಲಯದ ಬಡಗಕಜೆಕಾರು ಎ ಒಕ್ಕೂಟದ ಸ್ವ ಸಹಾಯ ಗುಂಪಿನಲ್ಲಿ ಒಟ್ಟು 2,07,934ರೂ. ಲಾಭಾಂಶ ಹೊಂದಿದ್ದು ಸದಸ್ಯರಿಗೆ ವಲಯ ಮೇಲ್ವಿಚಾರಕ ವಸಂತಸಾಲಿಯಾನ್ ಅವರು ವಿತರಿಸಿದರು. ಇದೇ ವೇಳೆ ಇಂಚರ ಗುಂಪಿನ ಸದಸ್ಯೆ ಪದ್ಮಾವತಿ ಅವರಿಗೆ 10,840 ರೂ. ಜೀವನಮಧುರ ವಿಮಾ ಯೋಜನೆಯ ಮರಣ ಸಾಂತ್ವನವನ್ನು ವಿತರಿಸಲಾಯಿತು. ಸೇವಾ ಪ್ರತಿನಿ ಕೋಕಿಲಾ ವೈ ಬಂಗೇರ, ಒಕ್ಕೂಟದ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಕಾರ್ಯದರ್ಶಿ ಗೀತಾ, ಜೊತೆ ಕಾರ್ಯದರ್ಶಿ ಕು| ಸೌಮ್ಯ ಉಪಸ್ಥಿತರಿದ್ದರು.

