ಸುದ್ದಿ9 ಕೈಕಂಬ: ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ. 3ರಂದು ಮಂಗಳವಾರ ದಿಂದ ಮಾ.8ರ ಭಾನುವಾರದವರೆಗೆ ಅಮೃತೇಶ್ವರ ದೇವರ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ಬೆಳಗ್ಗೆ 7ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ಸುಬ್ರಹ್ಮಣ್ಯ ಮಠದ ಸ್ವಾಮಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತಿರ್ಥ ಪಾದಂಗಳವರ ನೇತೃತ್ವದಲ್ಲಿ ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಕ್ಷಾಳನಾಧಿ, ಬಿಂಬಶುದ್ಧಿ ,ಅವಗಾಹ ಹೋಮ ಪ್ರೋಕ್ತ ಪ್ರಾಯಶ್ಚಿತ್ತ ಹೋಮ, ಮಹಾಗಣಪತಿ ಅಥರ್ವ ಶೀರ್ಷ ಹೋಮ ನೆರವೇರಿತು.


ಮಧ್ಯಾಹ್ನ 12-30ಕ್ಕೆ ಶ್ರೀ ಗಣಪತಿ ದೇವರ ಪುನಃ ಪ್ರತಷ್ಟೆ,ಅಷ್ಟಬಂಧ ಸ್ಥಾಪನೆ , ಕಲಶಾಭಿಷೇಕ,ಪ್ರಸನ್ನ ಪೂಜೆ ನೆರವೇರಿತು.
ಚಿತ್ರ :ವಿಶಾಲ್:



