sri naga brhmma sri naga kannike silanyasa

ಸುದ್ದಿ 9 ಬಂಟ್ವಾಳ; ದ್ವೇಷದ ರಾಜಕಾರಣಕ್ಕೆ ಹಿಂದೂಧರ್ಮ ಬಲಿಯಾಗುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ತುಂಬೆ ರಾಮಲ್ ಕಟ್ಟೆಯ ಶ್ರೀ ಕ್ಷೇತ್ರ ಗೋಮಯಿಯಲ್ಲಿ ನಿಮರ್ಾಣಗೊಳ್ಳಲಿರುವ ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿ, ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

sri naga brhmma sri naga kannike silanyasa
sri naga brhmma sri naga kannike silanyasa

ಚಿತ್ರ ಕಿಶೋರ್ ಪೆರಾಜೆ.
ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಭಾರತದ ಮೇಲೆ ಪಾಶ್ಚಾತ್ಯರ ಆಕ್ರಮಣ ಹೆಚ್ಚಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಆಧ್ಯಾತ್ಮಿಕ ಚಿಂತನೆಗಳು ಬಲಗೊಳಬೇಕೆಂದ ಅವರು, ಆ ಮೂಲಕ ರಾಜಕೀಯದಲ್ಲೂ ಧರ್ಮ ಜಾಗೃತಗೊಳ್ಳಲಿ ಎಂದರು.
ಮಂಗಳೂರು ವಿಶ್ವಹಿಂದೂ ಪರಿಷತ್ ನ ಧರ್ಮಪ್ರಸರಣಾ ಪ್ರಮುಖ್ ಜಿತೇಂದ್ರ ಎಸ್.ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ಗುತ್ತಿಗೆದಾರ ಉಮೇಶ್ ಸುವರ್ಣ, ಶಿಲ್ಪಿ ಬಸ್ತಿ ಸದಾಶಿವ ಶೆಣೈ, ತುಂಬೆ ಗ್ರಾ.ಪಂ.ಸದಸ್ಯ ಪ್ರವೀಣ್ ತುಂಬೆ, ಪುದು ಗ್ರಾ.ಪಂ.ಸದಸ್ಯ ಮನೋಜ್ ಆಚಾರ್ಯ , ಶಾಂತಾ ಜಿ.ಚೌಟ, ಶ್ರೀ ಕ್ಷೇತ್ರ ಗೋಮಯಿಯ ಗೌರವಾಧ್ಯಕ್ಷ ಗಣೇಶ್ ಸುವರ್ಣ, ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಸಂಜೀವ ಪೂಜಾರಿ ಸ್ವಾಗತಿಸಿದರು. ಮಲ್ಲಿಕಾ ಧನಂಜಯ್ ವಂದಿಸಿದರು. ವಿಜೇತ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.

 

By suddi9

Leave a Reply

Your email address will not be published. Required fields are marked *