ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿ ಫೆ.8ರಂದು ನಡೆಯಲಿರುವ ವಿರಾಟ್ ಹಿಂದೂ ಸಮಾಜ್ಯೋತ್ಸವಕ್ಕೆ ವಿಹಿಂಪದ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಬೆಂಗಳೂರು ಬರಲು ನಿರ್ಬಂಧಿಸಿದರೂ ಸಹ ನಿರ್ಬಂಧವನ್ನು ಧಿಕ್ಕರಿಸಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

ತೊಗಡಿಯಾ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ ಎಂದು ಮೂಲಗಳಿಂದ ಲಭ್ಯವಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಹಠ ಹಿಡಿದವರಂತೆ ವಿಡಿಯೋ ಕಾನ್ಪೆರೆನ್ಸ್ ಭಾಷಣಕ್ಕೂ ನಿರ್ಬಂಧ ವಿಧಿಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

