ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅರ್ಕಾವತಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಅಕ್ರಮವಾಗಿ ಡಿನೋಟಿಫಿಕೇಶ್ ಮಾಡಿರುವ ಬಗ್ಗೆ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಸಿಎಂ ಖುರ್ಚಿ ಅಲುಗಾಡಲು ಆರಂಭವಾಗಿದೆ.

ಡಿನೋಟಿಫಿಕೇಶನ್ ಬಗ್ಗೆ ಕ್ರಿಮಿನಲ್ ಖಟ್ಲೆ ಹೂಡಲು ಇಬ್ಬರು ವಕೀಲರು ರಾಜ್ಯಪಾಲರ ಅನುಮತಿ ಕೇಳಿದ್ದು, ಅನುಮತಿ ಲಭಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಸಾಮಾಜಿಕ ಹೋರಾಟಗಾರರೂ ಸಹ ಸಿಎಂ ವಿರುದ್ಧ ನ್ಯಾಯಲಯದಲ್ಲಿಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಸೂಕ್ತ ದಾಖಲೆಗಳು ಸಾಮಾಜಿಕ ಹೋರಾಟಗಾರ ಹಿರೇಮಠ್ ಕೈಗೆ ಸಿಕ್ಕಿರುವುದರಿಂದ ಅವರೂ ಕೂಡಾ ದಾವೆ ಹೂಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸದ್ಯದ ಭವಿಷ್ಯ ರಾಜ್ಯಪಾಲರ ಮೇಲಿದೆ.
