ಕೈಕಂಬ: ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ದೇಶದವರು ಊರಿನ ಬೊಂಡಕ್ಕೆ ಮಾರು ಹೋದ ಘಟನೆ ಇಂದು ಕೈಕಂಬದಲ್ಲಿ ಮೂರು ಗಂಟೆಯ ಸುಮಾರಿಗೆ ನಡೆದಿದೆ.

ಜರ್ಮನ್ನಿಂದ ಭಾರತಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲೆಂದು ಜರ್ಮನರ 1800 ಜನರ ತಂಡ ಭಾರತಕ್ಕೆ ಬಂದಿದೆ. ಜರ್ಮನ್ನಿಂದ ಕೊಚ್ಚಿಗೆ ಬಂದಿಳಿದು ಅಲ್ಲಂದ ಹಡಗಿನ ಮೂಲಕ ಮಂಗಳೂರಿಗೆ ಬಂದಿಳಿದ ತಂಡ ಮಂಗಳೂರನ್ನು ಸುತ್ತಾಡಿತು. ಅದರ ಪೈಕಿ ಕೆಲವರು ಮೂಬಿದ್ರೆಯ ಪ್ರಾಚೀನ ದೇವಸ್ಥಾನಗಳ ಅಧ್ಯಯಮನಕ್ಕೆಂದು ರಿಕ್ಷಾಗಳ ಮೂಲಕ ಮೂಡಬಿದ್ರೆಗೆ ಟ್ರೆಕ್ಕಿಂಗ್ ಹೊರಟರು. ಮಂಗಳೂರಿನಿಂದ ಮೂಡಬಿದ್ರೆಗೆ ತೆರಳುವ ಮಾರ್ಗದ ಮಧ್ಯೆ ಬರುವ ಕೈಕಂಬದಲ್ಲಿ ಬೊಂಡದಂಗಡಿಯನ್ನು ಕಂಡು ಅಲ್ಲೇ ತನ್ನ ವಾಹನವನ್ನು ನಿಲ್ಲಿಸಿ ಊರಿನ ಬೊಂಡ ಕುಡಿದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡರು.






