ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಶ್ರೀ ಮಣಿಕಂಠ ಭಜನಾಮಂದಿರದ 9ನೇ ವರ್ಷದ ಭಜನಾ ಸಂಕೀರ್ತನೆಯು ಜ.3ರಂದು ಶನಿವಾರ ಸೂರ್ಯಹಸ್ತದಿಂದ ಪ್ರಾರಂಭಗೊಂಡು ಮರುದಿನ ಜ.4ರಂದು ಭಾನುವಾರ ಸೂರ್ಯೋದಯದವರೆಗೆ ಮಣಿಕಂಠಪುರದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರಗಲಿದೆ.

ಪೊಳಲಿ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಆಶೀರ್ವದದೊಂದಿಗೆ ಕೊಡ್ಮಾನ್ ಕಾಂತಪ್ಪ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ . ಜ.4ರಂದು ಭಾನುವಾರ ಬೆಳಗ್ಗೆ 8.30ರಿಂದ ಬಾಬು ಗುರುಸ್ವಾಮಿ ಇವರಿಂದ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ಕ್ಕೆ ಸ್ವಾಮಿಯ ಮಹಾಪೂಜೆ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪನೆ ಜರಗಲಿದೆ. ಎಂದು ಮಣಿಕಂಠ ಭಜನಾಮಂದಿರದ ಪ್ರಕಟನೆ ತಿಳಿಸಿದೆ.
