ಸಾಹಿತ್ಯ,ಕಲೆಗಳಿಂದ ಬದುಕು ಸುಂದರ: ಭಟ್ಟಾರಕಶ್ರೀ
ಸುದಿ9 ಮೂಡುಬಿದರೆ: ರತ್ನಾಕರವರ್ಣಿ ಮೂಡುಬಿದರೆಯವನೆನ್ನುವುದೇ ನಮಗೆ ಹೆಮ್ಮೆಯ ವಿಷಯ. ಆತನ ಸರಳ ಶೈಲಿ ಉಪಮೆಗಳೊಂದಿಗೆ ವಿವರಣೆ ಹಾಗೂ ಕವಿಹೃದಯ ಅನುಪಮ. ಸಾಹಿತ್ಯ ಕಲೆಗಳು ನಮ್ಮ ಬದುಕನ್ನು ಸುಂದರಗೊಳಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದತ್ತ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಮೂಡುಬಿದರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಮಹಾಕವಿ ರತ್ನಾಕರರ್ಣಿ 500 ಜನ್ಮೋತ್ಸವ ಪ್ರಯುಕ್ತ ಶನಿವಾರ ನಡೆದ ಸಾಹಿತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಆಶೀವರ್ಚನ ನೀಡಿದರು. ಕಾರ್ಕಳದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ರಾಮಚಂದ್ರ ಪ್ರಧಾನ ಭಾಷಣಕಾರರಾಗಿದ್ದರು. ಉಜಿರೆ ಎಸ್ಡಿಎಂ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅಧ್ಯಕ್ಷತೆ ವಹಿಸಿದ್ದರು. ಪಠ್ಯದ ವಿಷಯಗಳೊಂದಿಗೆ ಸಾಹಿತ್ಯ, ಕಲೆಯ ಅಭಿರುಚಿ ಬೆಳೆಸಿಕೊಂಡರೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಬಹುಮಾನ ಪ್ರಾಯೋಜಕ ಸಿ.ಕೆ.ಪಡಿವಾಳ್ ಅವರು ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಪಾ.ಅನಂತರಾಜ ಇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಂ.ಕೆ.ನಿರ್ಮಲ್ ಕುಮಾರ್, ಪತ್ರಕರ್ತ ಗಣೇಶ್ ಕಾಮತ್, ವಾಣಿ ಅಭಯ ಕುಮಾರ್ ತೀರ್ಪುಗಾರಗಿದ್ದರು. ಪ್ರಾಧ್ಯಾಪಕ ಅಜಿತ್ ಪ್ರಸಾದ್, ಸರಸ್ವತಿ, ರಾಜಶ್ರೀ, ಸುಶಾಂತ್, ರತ್ನಕುಮಾರ್ ಉಪಸ್ಥಿತರಿದ್ದರು. ಸಹನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪಾಲಕ ಶಿಕ್ಷಕ ಸಂಘದ ಸಂಯೋಜಕ ಬಾಹುಬಲಿ ಪ್ರಸಾದ್ ವಂದಿಸಿದರು, ಫಲಿತಾಂಶ: ಭರತೇಶ ವೈಭವ ಸಾಂಗತ್ಯ ಶೈಲಿ ಕಾವ್ಯ ವಾಚನದಲ್ಲಿ ಪಂಚಮ್ ಜೈನ್, ರತ್ನಾಕರ ಶತಕದ ಮೂರು ಶ್ಲೋಕ ಪಠಣದಲ್ಲಿ ಸುಶ್ರಾವ್ಯ ಜೈನ್ ಪ್ರಥಮ ಸ್ಥಾನಗಳಿಸಿದರು. ರತ್ನಾಕರವರ್ಣಿ ಪ್ರತಿಪಾಧಿಸಿದ ಜೀವನ ಮೌಲ್ಯಗಳು ಭಾಷಣ ಸ್ಪರ್ಧೆಯಲ್ಲಿ ಸುರಕ್ಷಾ ಪ್ರಥಮಸ್ಥಾನಿಯಾಗಿದ್ದರು. ಭರತೇಶ ವೈಭವದಲ್ಲಿ ಪ್ರತಿಧ್ವನಿಸುವ ಯೋಗ-ಭೋಗ ಸಮನ್ವಯ ಪ್ರಬಂಧ ಸ್ಪರ್ಧೆಯಲ್ಲಿ ವರ್ಣಶ್ರೀ ಪ್ರಥಮ ಸ್ಥಾನಿಯಾದರು.

