ಕಡಬ: ಅದ್ದೂರಿಯಾಗಿ ನಡೆಯಬೆಕಾಗಿದ್ದ ಮದುವೆಯೊಂದರಲ್ಲಿ ಮದುಮಗಳೇ ನಾಪತ್ತೆಯಾದ ಸಿನಿಮೀಯ ಘಟನೆಯೊಂದು ಕಡಬದಲ್ಲಿ ನಡೆದಿದೆ. ಸಮೀಪದ ಬಿಳಿನೆಲೆ ಗ್ರಾಮದ ಕಳಿಗೆ ನಿವಾಸಿ ನಿತ್ಯಾನಂದ ಎಂಬವರ ಪುತ್ರಿ ಬೆಂಗಳೂರಿನಲ್ಲಿರುವ ವೈದ್ಯೆಯಾಗಿರುವ ಡಾ. ಕಪಾ ಮದುವೆಯ ದಿನವೇ ನಾಪತ್ತೆಯಾಗಿದ್ದು, ಈ ಬಗ್ಗೆ ಕಡಬ ಠಾಣೆಗೂ ದೂರು ನೀಡಲಾಗಿದೆ. ಈಕೆಗೆ ಪಂಜ ಐವತ್ತೊಕ್ಲು ಗ್ರಾಮದ ದೊಡ್ಡಮನೆ ನಿವಾಸಿ ಕಡಬದಲ್ಲಿ ಕ್ಲಿನಿಕ್ ಹೊಂದಿರುವ ಡಾ. ದೇವಿಪ್ರಸಾದ್ ಜತೆ ಸೋಮವಾರ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗಾಗಿ ಸುಂದರ ಮಂಟಪ ಮಂಟಪದಲ್ಲಿ , ಅದ್ದೂರಿ ಊಟದ ತಯಾರಿಯೂ ನಡೆದಿತ್ತು. ಆದರೆ ಮದುವಣಗಿತ್ತಿ ಮುಂಜಾನೆ ನಾಲ್ಕು ಗಂಟೆಯ ಹೊತ್ತಿಗೆ ನಾಪತ್ತೆಯಾಗಿದ್ದರು. ಈಕೆ ತನ್ನ ಪ್ರಿಯಕರ, ಸಹೊದ್ಯೋಗಿ ಜತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮದುವೆ ಗಂಡು ಇದರಿಂದ ಕಂಗಾಲಾಗಿ ಮದುವೆಗಾಗಿ ತಾನು ಮಾಡಿದ ಖರ್ಚುಗಳನ್ನು ನಿಡಬೇಕೆಂದು ಕಡಬ ಠಾಣೆಗೆ ಬಂದು ದೂರು ನೀಡಿದರು.
devi - kripa

ಡಾ. ಕೃಪಾ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಸುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ ತುಮಕೂರು ಮೂಲದ ವ್ಯಕ್ತಿಯೊಂದಿಗೆ ಪ್ರೇಮವಿತ್ತು ಎನ್ನಲಾಗಿದೆ. ಈ ವಿಚಾರ ಗೊತ್ತಿದ್ದೂ ಈಕೆಯನ್ನು ಮನವೊಲಿಸಿ ರಾಜಿ ಸೂತ್ರ ಏರ್ಪಡಿಸಿ ಪಂಜದ ಡಾಕ್ಟರ್‌ರೊಂದಿಗೆ ಎಂಟು ತಿಂಗಳ ಹಿಂದೆ ಮದುವೆ ನಿಶ್ಚಯ ಮಾಡಲಾಗಿತ್ತು. ಭಾನುವಾರ ಮದುರಂಗಿ ಶಾಸ್ತ್ರ ಕೂಡಾ ನಡೆದಿತ್ತು. ಈ ಸಂದರ್ಭದಲ್ಲಿ ಮದುಮಗಳ ಬೆಂಗಳೂರಿನ ಸ್ನೇಹಿತರು ಕೂಡಾ ಭಾಗಿಯಾಗಿದ್ದರು. ಇದೇ ವೇಳೆ ಪ್ರಿಯತಮ ಡಾ.ವಿಜಯ ಕೂಡಾ ಬಂದಿದ್ದು, ಆತನನ್ನು ಮನವೊಲಿಸಿ ಕಳುಹಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊನೆ ತನಕ ವರನೊಂದಿಗೆ ಕೂಡ ಸಂಪರ್ಕದಲ್ಲಿದ್ದ ಕೃಪಾ ಮದುವೆ ದಿನ ಮುಂಜಾನೆ ನಾಲ್ಕುವರೆಯ ಹೊತ್ತಿಗೆ ನಾಪತ್ತೆಯಾಗಿದ್ದರು. ಮನೆಯವರಿಗೆ ಆಕೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದು ಮನೆಯವರಿಗೆ ಖಾತ್ರಿಯಾಗಿದ್ದು, ಈ ಬಗ್ಗೆ ಮದುಮಗಳು ನಾಪತ್ತೆಯಾಗಿದ್ದಾರೆ ಎಂದು ಕಡಬ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *