ಸುದ್ದಿ9 ಕೈಕಂಬ: ಪೊಳಲಿ ಅಡ್ಡೂರು ಸಮೀಪದ ಅಗ್ರಹಾರ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯು ಡಿ.25ರಂದು ಜರಗಿತು.
ಮುಖ್ಯಪ್ರಾಣ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ನಡೆದು ಸತ್ಯನಾರಾಯಣ ಪೂಜೆಯು ನೂಯಿ ರಾಜಶೇಖರ ರಾವ್ ನೇತ್ರತ್ವದಲ್ಲಿ ನಡೆಯಿತು. ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮೊಕ್ತೆಸರ ನೂಯಿ ಬಾಲಕೃಷ್ಣ ರಾವ್, ವಿಷ್ಣುಮೂರ್ತಿ ಭಟ್, ಚಂದ್ರ ಭಟ್, ಉದಯ ಮತ್ತಿತರರು ಇದ್ದರು. ಮಧ್ಯಾಹ್ನ ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪನೆ ಜರಗಿತು.





