ಬಂಟ್ವಾಳ :ಬಂಟ್ವಾಳ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ” ಇಂಜಿನೀಯರ್ಸ್ ಡೇ” ಕಾರ್ಯಕ್ರಮವನ್ನು ತಾಲೂಕು ಸಮಿತಿ ಅಧ್ಯಕ್ಷರಾದ ಇಂಜಿನೀಯರ್ ಪ್ರಕಾಶರವರ ಕಚೇರಿಯಲ್ಲಿ ಆಚರಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಇಂಜಿನೀಯರ್ ತಾರಾನಾಥ ಕೊಟ್ಟಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ರವರ ಜೀವನ, ಆದರ್ಶ, ಕರ್ತತ್ವ ಶಕ್ತಿ ಬದ್ಧತೆ ಯನ್ನು ತಿಳಿಸಿದೆಉ. ಇಂಜಿನೀಯರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು,ಇಂಜಿನೀಯರ್ ಸುಧೀರ್ ಶೆಟ್ಟಿ ಸ್ವಾಗತಿಸಿ, ಇಂಜಿನೀಯರ್ ರಾಜೇಶ್ ವಂದಿಸಿದರು,ಇಂಜಿನೀಯರ್ ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು
