ಪೊಳಲಿ : ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ರಾಜರಾಜೇಶ್ವರಿ  ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ದೇವಸ್ಥಾನದ ವತಿಯಿಂದ ಕ್ರಮ ಕೈಗೊಳ್ಳಬೇಕು ಮತ್ತು  ಶಾಸ್ತ್ರೀಯ ಹಿನ್ನೆಲೆ ಉಳ್ಳಂತಹ ಸಂಗೀತ ಮತ್ತು ನಾಟ್ಯ ಶಾಲೆಯನ್ನು (ವಿದ್ವತ್‌  ಹಂತದವರೇಗೆ)  ವ್ಯವಸ್ಥಿತವಾಗಿ ಆರಂಭಿಸಬೇಕು ಎಂಬ ಬೇಡಿಕೆಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್‌ ಇವರಿಗೆ ಹಿಂದೂ ಧಾರ್ಮಿಕ ಶಿಕ್ಷಣ ಹಕ್ಕೊತ್ತಾಯ ಸಮಿತಿ ಕರಿಯಂಗಳ ಪೊಳಲಿ ಇವರು ಮನವಿ ನೀಡಿದರು.

ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಇವರಿಗೂ ನೀಡಲಾಯಿತು.  ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಹಕ್ಕೊತ್ತಾಯ ಸಮಿತಿ ಕರಿಯಂಗಳ ಪೊಳಲಿಯ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ನಾರಳ , ವಂಕಟೇಶ್‌ ನಾವಡ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ , ಚಂದ್ರಶೇಖರ್‌ ಭಂಡಾರಿ, ಸುಕೇಶ್‌ ಚೌಟ ಬಡಕಬೈಲು, ಭಾಸ್ಕರ ಮೊಗರು, ಕಿಶೋರ್‌ ಪಲ್ಲಿಪಾಡಿ,  ರಾಧಕೃಷ್ಣ  ತಂತ್ರೀ , ಯಶವಂತ ಪೊಳಲಿ, ಲಕ್ಷ್ಮೀಶ್‌ ಶೆಟ್ಟಿ,  ಜನಾರ್ಧನ ಅಮ್ಮುಂಜೆ, ಯಶೋಧರ ಪೊಳಲಿ, ಕಾರ್ತಿಕ್‌ ಬಳ್ಳಾಲ್‌ ,  ಯುವರಾಜ್‌ ಪೂಂಜ, ಜಗದೀಶ್‌ ಆಚಾರ್ಯ,ಸಂದೀಪ್‌ ಕಮ್ಮಾಜೆ , ಚಂದ್ರಶೇಖರ ಶೆಟ್ಟಿ ,ಕೇಶವ ಪೊಳಲಿ, ಚಂದ್ರಾವತಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದರು.

By Suddi9

Leave a Reply

Your email address will not be published. Required fields are marked *