ಬಂಟ್ವಾಳ: ನಿವೃತ್ತ ನ್ಯಾಯಮೂರ್ತಿ ,ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರು ಮೆಲ್ಕಾರ್ ಸಮೀಪದ ನರಹರಿ ಪರ್ವತಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ನಿಸರ್ಗದ ಮಡಿಲಲ್ಲಿರುವ ನರಹರಿ ಪರ್ವತದ ೬ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರಲ್ಲದೆ ಅಪೂರ್ವ ಸೌಂದರ್ಯದ ಶಿಖರವಾಗಿರುವ ಹಚ್ಚ ಹಸುರಿನ ಪರಿಸರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕರಾದ ಪರಮೇಶ್ವರಮಯ್ಯ ಅರ್ಚಕರಾದ ಉದಯ್ ಭಟ್, ಮ್ಯಾನೇಜರ್ ಆನಂದ್ ರವರು ಉಪಸ್ಥಿತರಿದ್ದರು.
