ಬಂಟ್ವಾಳ:ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಮೆಲ್ಕಾರ್, ಬಂಟ್ವಾಳ ಇದರ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಕೈಯೂರು ನಾರಾಯಣ ಭಟ್ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಪೆರಾಜೆ ಆಯ್ಕೆಗೊಂಡಿದ್ದಾರೆ.

ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರ ಸಂಘದ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಜ್ಯೋತಿಯವರು ಚುನಾವಣಾಧಿಕಾರಿಯಾಗಿದ್ದು, ಆಯ್ಕೆ- ಪ್ರಕ್ರಿಯೆ ನಡೆಸಿಕೊಟ್ಟರು. ಕಾರ್ಯನಿರ್ವಾಹಣಾಧಿಕಾರಿ ಭವ್ಯ , ವಿನಿತ್ ಶೆಟ್ಟಿ ಸಹಕರಿಸಿದರು. ನೂತನ ನಿರ್ದೇಶಕರುಗಳಾದ ನಿವೃತ್ತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ, ಉದ್ಯಮಿ ಅನಂತ ಪ್ರಭು ನೇರಳಕಟ್ಟೆ , ನಿವೃತ್ತ ಮುಖ್ಯ ಶಿಕ್ಷಕಿ ರಮಾ ಎಸ್. ಭಂಡಾರಿ ಸಜಿಪ, ಪ್ರಗತಿಪರ ಕೃಷಿಕ ಜಯರಾಮ ಶೇಖ ಮಂಚಿ, ವೇ.ಮೂ. ಈಶ್ವರ ಭಟ್ ಮಂಚಿ, ನಿವೃತ್ತ ಆರೋಗ್ಯಾಧಿಕಾರಿ ಜಯರಾಮ ಪೂಜಾರಿ, ಉದ್ಯಮಿ ಮುರಳಿಧರ ರಾವ್, ಭವಾನಿ ಶಂಕರ ಪುತ್ತೂರು , ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಸಾಮಾಜಿಕ ಕಾರ್ಯಕರ್ತೆ ರಾಜೀವಿ ಕೃಷ್ಣಪ್ಪ ಹಾಜರಿದ್ದರು.
ಮುಂದಿನದಿನ ಐದು ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೧೨ ಮಂದಿ ಆಯ್ಕೆಯಾಗಿದ್ದಾರೆ
