ಬಿಲ್ಲವ ಸಂಘದ ಅಮ್ಟೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ ಅಮ್ಟೂರು ಗ್ರಾಮ ಸಮಿತಿಯ ಅಧ್ಯಕ್ಚರಾಗಿ ಸತೀಶ್ ಪೂಜಾರಿ ಕೇಶವನಗರ ಅವರು ಆಯ್ಕೆಯಾಗಿದ್ದಾರೆ.ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ರವರ ಅಧ್ಯಕ್ಷತೆಯಲ್ಲಿ ನಾಗೇಶ್ ಕರಿಂಗಾನ ರವರ ಮನೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

ಉಳಿದಂತೆ ಪದಾಧಿಕಾರಿಗಳಾಗಿ ಇಂತಿದ್ದಾರೆ.:ಮಹಾಬಲ ಸಾಲಿಯಾನ್ ಮುಳಿಕೊಡಂಗೆ(ಗೌರವಧ್ಯಕ್ಷರು),:ಮೋಹನದಾಸ್ ಅಂತರಗುತ್ತು, ವಸಂತಕುಮಾರ್ ಕರಿಂಗಾನ(ಉಪಾಧ್ಯಕ್ಷರು),ಯತೀಶ್ ಕುಮಾರ್ ಮುಳಿಕೊಡಂಗೆ(ಕಾರ್ಯದರ್ಶಿ),
ಜನಾರ್ಧನ ಕರಿಂಗಾನ ಮತ್ತು ಹರೀಶ್ ಕೇಶವನಗರ ಕೆದ್ಲ(ಜತೆಕಾರ್ಯದರ್ಶಿಗಳು),
:ಕುಶಲ ಕರಿಂಗಾನ(ಕೋಶಾಧಿಕಾರಿ),ಗೋಪಾಲ ಪೂಜಾರಿ ಪೊಯ್ಯೇಕಂಡ (ಗೌರವ ಸಲಹೆಗಾರರು),ಗೋಪಾಲಕೃಷ್ಣ ಪೂವಳ, ಶರತ್ ಕರಿಂಗಾನ, ಕಿರಣ್ ಕರಿಂಗಾನ, ಕೊರಗಪ್ಪ ಮಣ್ಣಗುರಿ (ಸಂಘಟನಾ ಕಾರ್ಯದರ್ಶಿಗಳು)
ಇವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ(ರಿ.) ಕಲ್ಲಡ್ಕ ವಲಯದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ನಿಯೋಜಿತ ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಅಮ್ಟೂರುಮೊದಲಾದವರು ಉಪಸ್ಥಿತರಿದ್ದರು.



