ಬಂಟ್ವಾಳ : ನಾರಾಯಣಗುರುಗಳ ದೃಷ್ಟಿಯಲ್ಲಿ ದೇವರು ಕಲ್ಲಿನೊಳಗಿಲ್ಲ, ಅವನು ಕರುಣೆ, ಪ್ರೀತಿ, ಮಾನವತೆಯೊಳಗಿದ್ದಾನೆ. ಅವರು ನಿರ್ಮಿಸಿದ ದೇವಾಲಯಗಳು ಕೇವಲ ಪೂಜೆಯ ಸ್ಥಳವಲ್ಲ, ಅವು ಮಾನವನ ಆತ್ಮಕ್ಕೆ ದಿಕ್ಕು ತೋರಿದ ಬೆಳಕಿನ ಮಂದಿರಗಳು. ನಾರಾಯಣಗುರುಗಳ ಜೀವನವೆಂದರೆಅಜ್ಞಾನದಿಂದ ಜ್ಞಾನಕ್ಕೆ,
ಅಸಮಾನತೆಯಿಂದ ಸಮಾನತೆಗೆ,ಅಹಂಕಾರದಿಂದ ಮಾನವೀಯತೆಗೆ ನಡೆದ ಪವಿತ್ರ ಪಯಣದಲ್ಲಿ ಜ್ಞಾನ, ಸಮಾನತೆ, ಮಾನವೀಯತೆಯ ಪ್ರತಿಧ್ವನಿಯಾದ ನಾರಾಯಣಗುರುಗಳ ಧ್ಯೇಯ ಹೃದಯದೊಳಗೆ ಪ್ರತಿಧ್ವನಿಸುತ್ತಿದೆ ಎಂದು ಶಿಕ್ಷಕಿ, ಬರಹಗಾರ್ತಿ ರೇಣುಕಾ ಕಣಿಯೂರು ತಿಳಿಸಿದರು


ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಭವಾನಿ ಕೆ ಮತ್ತು ಮಕ್ಕಳ ಆತಿಥ್ಯದಲ್ಲಿ ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 59ರಲ್ಲಿ ಅವರು ಗುರುಸಂದೇಶ ನೀಡಿದರು.ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಸಜಿಪ ಅನ್ನಪ್ಪಾಡಿ ಬಾಲಗಣಪತಿ ದೇವಸ್ಥಾನದ ಅಧ್ಯಕ್ಷ ಯಶವಂತ ದೇರಾಜೆ,
ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಅಧ್ಯಕ್ಷ ರಮೇಶ್ ಅನ್ನಪ್ಪಾಡಿ. ಉಪಾಧ್ಯಕ್ಷ ತಿಲಕರ ಪೂಜಾರಿ ಕಾರ್ಯದರ್ಶಿ ಅಶ್ವಿನ್ ಪೂಜಾರಿ ಕಾರಾಜೆ ಕೋಶಾಧಿಕಾರಿ  ನಾರಾಯಣ ಪೂಜಾರಿ ಕೊಟ್ಟರಿಪಾಲು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಸುಭಾಶ್ ನಗರ. ಮಹಿಳಾ ಸಮಿತಿ ಅಧ್ಯಕ್ಷೆ ಯೋಗಿನಿ ಉಪಾಧ್ಯಕ್ಷೆ ಹರ್ಷಿಣಿ ಕಾರ್ಯದರ್ಶಿ ನಳಿನಿ ನಿತ್ಯಾನಂದ, ಭಜನಾ ಅಧ್ಯಕ್ಷರು ಲೋಕೇಶ್ ಪೂಜಾರಿ ಪ್ರವೀಣ್ ಪೂಜಾರಿ, ಸದಾಶಿವ ದೇವಸ್ಥಾನ ಈಶ್ವರಮಂಗಿಲ ಅಧ್ಯಕ್ಷ
ಗಿರೀಶ್ ಕುಮಾರ್ ಪೆರ್ವ  ಉಪಸ್ಥಿತರಿದ್ದರು.
ಇದಕ್ಕು ಮೊದಲು ಗುರುತತ್ವವಾಹಿನಿ ಭಜನಾ ಸಂಕೀರ್ತನೆ ನಡೆಯಿತು.ಯುವವಾಹಿನಿ  ಬಂಟ್ವಾಳ ಘಟಕದ ನಿರ್ದೇಶಕ  ಪ್ರಜಿತ್ ಅಮಿನ್ ಏರಮಲೆ ಕಾರ್ಯಕ್ರಮ ನಿರೂಪಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು. 

By Suddi9

Leave a Reply

Your email address will not be published. Required fields are marked *