ಬಂಟ್ವಾಳ: ಜವಾಹರ್ ಬಾಲ್ ಮಂಚ್ ಇದರ ಮಕ್ಕಳ ಒಕ್ಕೂಟದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಶೌರ್ಯ ಎಸ್ ಆರ್ ಆಯ್ಕೆಯಾಗಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವದಲ್ಲಿ, ರಾಜ್ಯಾಧ್ಯಕ್ಷರಾದ ಮೈನುದ್ದಿನ್ ರವರ ಶಿಫಾರಸ್ಸಿನಂತೆ ರಾಷ್ಟ್ರೀಯಾಧ್ಯಕ್ಷರಾದ ಡಾ. ಜಿ.ವಿ ಹರಿ ಈ ಆಯ್ಕೆಯನ್ನು ಘೋಷಿಸಿದ್ದಾರೆ.
ಬಂಟ್ವಾಳ ತಾಲೂಕಿನ ಡಾಕ್ಟರ್ ರಾಜೇಶ್ ಹಾಗೂ ನ್ಯಾಯವಾದಿ ಶೈಲಜಾ ದಂಪತಿಗಳ ಪುತ್ರನಾಗಿದ್ದು, ಸಾಂಸ್ಕೃತಿಕ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಪಡಕೊಂಡಿರುತ್ತಾರೆ
