ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಹಸ್ತಾಂತರ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಪದ್ಮನಾಭ ಪೂಜಾರಿ ಯವರ ಅನಾರೋಗ್ಯದ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಅಡಿಯಲ್ಲಿ 20 ಸಾವಿರ ರೂ. ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ಬಾಳ್ತಿಲಾ ಒಕ್ಕೂಟದ ಅಧ್ಯಕ್ಷರ ಉಮಾವತಿ ಪುರ್ಲಿ ಪಾಡಿ, ಸೇವ ಪ್ರತಿನಿಧಿ ವಿದ್ಯಾ, ಒಕ್ಕೂಟದ ಪದಾಧಿಕಾರಿಗಳಾದ ನೇತ್ರಾವತಿ, ವಿಮಲಾ ಹಾಗೂ ಸ್ಥಳೀಯರಾದ ನವೀನ ಸುಧೆಕಾರು ಉಪಸ್ಥಿತರಿದ್ದರು



