ಅಡ್ಡೂರು:ಶ್ರೀ ಮುಖ್ಯಪ್ರಾಣ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ಸಭೆಯು ಜೂ.೫ರಂದು ಗುರುವಾರ ಶ್ರೀಕ್ಷೇತ್ರದ ಆಡಳಿತಾಧಿಕಾರಿ ಶ್ರೀಮತಿ ಶಿಲ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ಚಂದ್ರ ಅಮೀನ್ ಅಡ್ಡೂರು ಬರ್ಕೆ ಆಯ್ಕೆಯಾಗಿದ್ದಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಚಂದ್ರಶೇಖರ ಭಟ್ ನಡುಮನೆ ಶಿವಾನಂದ ,ಯೋಗಿನಿ ,ಪದ್ಮಿನಿ, ಶೇಖರ ಪೂಜಾರಿ, ಬಾಲಕೃಷ್ಣ ಶೆಟ್ಟಿ,ಸುಭಾಶ್ಚಂದ್ರ ಕೀರ್ತನ್ ಕುಮಾರ್ ಅಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯ ಎಪ್ರೀಲ್ ೧೧-೨೦೨೫ರಂದು ವಿಷಯ ಸೂಚಿ ಸಂಖ್ಖೆ ೦೩ರ ನಿರ್ಣಯ ಆದೇಶನುದಾರವಾಗಿ ಶ್ರೀ ಕ್ಷೇತ್ರ ಮುಖ್ಯಪ್ರಾಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರನ್ನೊಲಗೊಂಡು ಒಂಬತ್ತು ಜನರನ್ನು ಆಯ್ಕೆ ಮಾಡಲಾಗಿದೆ
