ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ.) ವಿಟ್ಲ ಇದರ ವೀರಕಂಬ ಕಾರ್ಯಕ್ಷೇತ್ರದ ಶ್ರೀ ದೀಪ ಸಂಘದ ಸದಸ್ಯೆ ಜಾನಕಿ ಅವರ ಪತ್ರ ರಕ್ಷಿತ್ ರವರು ಅಪಘಾತ ಹೊಂದಿದ್ದು ಶ್ರೀ ಕ್ಷೇತ್ರದ ದಿಂದ ಕ್ರಿಟಿಕಲ್ ಫಂಡ್ ನಡಿಯಲ್ಲಿ ಮಂಜೂರಾದ 20 ಸಾ.ರೂ.ಸಹಾಯಧನದ ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕ ಶುಕರಾಜ್, ವೀರಕಂಭ ಒಕ್ಕೂಟದ ಅಧ್ಯಕ್ಷೆ ಶಾಂಭವಿ ಆಚಾರ್ಯ, ಹರೀಶ್ ಬಂಗೇರ,ಪದಾಧಿಕಾರಿಗಳಾದ ರಜನಿ,ಆನಂದ, ಸವಿತಾ ಹಾಗೂ . ಒಕ್ಕೂಟ ಸೇವಾ ಪ್ರತಿನಿಧಿ ವಿಜಯ ಉಪಸ್ಥಿತರಿದ್ದರು
