Published On: Fri, May 9th, 2025

ಪೊಳಲಿ ಕಾಳಿಸರೋವರ ಪುನಶ್ಚೇತನ: ಡಾ.ಹೆಗ್ಗಡೆ ದಂಪತಿಯಿಂದ ಬಾಗಿನ ಸಮರ್ಪಣೆ‌

ಬಂಟ್ವಾಳ :ಶ್ರೀ.ಕೇ.ಧ.ಗ್ರಾ.ಯೋ.ಬಂಟ್ವಾಳ ಬಿ.ಸಿ. ಟ್ರಸ್ಟ್  ಮೂಲಕ ನಮ್ಮೂರು-ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ ಸುಮಾರು 10 ಲ.ರೂ.ವೆಚ್ಚದಲ್ಲಿ ಹೂಳೆತ್ತಿ ಪುನಶ್ಚೇತನ ಗೊಳಿಸಲಾದ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಬಳಿಯ “ಕಲ್ಕಟ ಕೊಳದ ಕೆರೆ”ಗೆ ( ಕಾಳಿಸರೋವರ)ಧರ್ಮಸ್ಥಳದ ಧರ್ಮಾಧಿಕಾರಿಗಳು,ರಾಜ್ಯ ಸಭಾಸದಸ್ಯರಾದ ಡಾ| ಡಿ.ವೀರೇಂದ್ರ ಹೆಗ್ಗಡೆ,ಪತ್ನಿ ಡಾ.ಹೇಮಾವತಿ ಹೆಗ್ಗಡೆ ಹಾಗೂ ಪುತ್ರಿ ಶೃದ್ದಾ ಅಮಿತ್  ಅವರು ಜತೆಯಾಗಿ ಗುರುವಾರ ಬಾಗಿನ ಸಮರ್ಪಿಸಿದರು.


ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಈ ಕೆರೆಯ ನಿರ್ವಹಣೆಗಾಗಿ  ಪ್ರಮಾಣಪತ್ರ ಹಾಗೂ ಕಲಶವನ್ನು ಡಾ.ಹೆಗ್ಗಡೆ ದಂಪತಿ “ಕೆರೆ ಅಭಿವೃದ್ದಿ ಸಮಿತಿ”ಗೆ ಹಸ್ತಾಂತರಿಸಿದರು.ಈ ಸಂದರ್ಭ ಮಾತನಾಡಿದ ಡಾ.ಹೆಗ್ಗಡೆ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಕೆರೆಗಳ ಪ್ರಾಮುಖ್ಯತೆ ಹೆಚ್ಚಾಗಿದ್ದು, ಕೆರೆಗಳ ಹೂಳೆತ್ತಿ ಪುನಶ್ಚೇತನ ಗೊಳಿಸುವುದರಿಂದ ಅಂತರ್ಜಲಮಟ್ಟ,ಅಕ್ಕಪಕ್ಕದ ಬಾವಿ,ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟವು ಸುಧಾರಿಸುತ್ತದೆಯಲ್ಲದೆ ನೀರಿನ ಕೊರತೆಯು ನೀಗುತ್ತದೆ.ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಮ್ಮೂರು-ನಮ್ಮಕರೆ ಕಾರ್ಯಕ್ರದಡಿ ರಾಜ್ಯದಾದ್ಯಂತ ಕೆರೆಗಳ ಪುನಶ್ಚೇತನಗೊಳಿಸಲಾಗುತ್ತಿದೆ ಎಂದರು.

ಪಾಳು ಬಿದ್ದ ಕೆರೆಗಳಿಂದ ತೆಗೆಯುವ ಫಲಭರಿತವಾದ ಮಣ್ಣನ್ನು ರೈತರು ಉಪಯೋಗಿಸುವುದರಿಂದ ಉತ್ತಮ ಫಸಲುಗಳನ್ನು ಪಡೆಯ ಬಹುದಾಗಿದೆ ಎಂದ ಡಾ.ಹೆಗ್ಗಡೆಯವರು ಪೊಳಲಿಯ  ಕಾಳಿಸರೋವರದ ಸುತ್ತಲಿನ ಪರಿಸರ,  ಸ್ವಚ್ಚವಾದ ಗಾಳಿ,ಮುಂಜಾನೆ ಹಾಗೂ ಸಂಜೆಯ ಹೊತ್ತಿನ ವಿಹಾರಕ್ಕು ಉತ್ತಮವಾದ ವಾತಾವರಣವನ್ನು ಹೊಂದಿದ್ದು,ಸುಂದರ ಪ್ರವಾಸಿತಾಣವನ್ನಾಗಿಸಲು ಎಲ್ಲಾರೀತಿಯ ಅವಕಾಶಗಳಿವೆ.ಈ ದೆಸೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿ ಮುಂದಡಿಡುವುದರ ಜತೆಗೆ ಕೆರೆ ಸಂರಕ್ಷಣೆಯ ಬಗ್ಗೆಯು ವಿಶೇಷ ಗಮನಹರಿಸಬೇಕು ಎಂದರು.


ಡಾ.ಹೇಮಾವತಿ ವೀ.ಹೆಗ್ಗಡೆಯವರು ಮಾತನಾಡಿ,ಕೆರೆಗಳ ಪುನಶ್ಚೇತನಗೊಳಿಸು ವುದರಿಂದ ಕೇವಲ ಮನುಷ್ಯರ ಮಾತ್ತವಲ್ಲ ಜೀವಸಂಕುಲಗಳ ನೀರಿನ ದಾಹವು ನೀಗುತ್ತದೆ.ಕೆರಗಳನ್ನು ಬಳಸುವುದರ ಜೊತೆಗೆ ಅದರ ರಕ್ಷಣೆಯ ಕಾರ್ಯವು ಆಗಬೇಕು ಎಂದರು.


ನಮ್ಮೂರು- ನಮ್ಮಕೆರೆ ಯೋಜನೆಯಡಿ ರಾಜ್ಯದಲ್ಲಿ 900 ಕ್ಕು ಅಧಿಕ ಕೆರೆಗಳಹೊಳೆತ್ತಿಪುನಶ್ಚೇತನಗೊಳಿಸಲಾಗಿದ್ದು,ಇದೊಂದು ಅಭಿಯಾನವಾಗಿ ರೂಪುಗೊಂಡಿದೆ.ಕೆರೆಯ ಸೌಂದರ್ಯಕರಣಕ್ಕು ವಿಶೇಷ ಒತ್ತುನೀಡಲಾಗುತ್ತಿದ್ದು,ಪ್ರತಿವರ್ಷ ಕೆರೆಹಬ್ಬ ಆಚರಿಸುವ ಮೂಲಕ ಅದರ ಸ್ಥಿತಿಗತಿ ಅವಲೋಕಿಸಬೇಕು ಎಂದ ಅವರು ಈರೀತಿಯ ಶಾಶ್ವತವಾದ ಕೆಲಸದಿಂದ ಮನಸ್ಸಿಗೆ ಸಿಗುವಂತ ಸಂತೃಪ್ತಿ,ಆನಂದ ಬೇರೊಂದಿಲ್ಲ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಮಾತನಾಡಿ,ಕಾಳಿಸರೋವರದ ಪರಿಸರವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿತಾಣವನ್ನಾಗಿಸಬೇಕೆಂಬ  ಯೋಚನೆಯಿದ್ದು,ಕೆರೆಯ ಒಂದಷ್ಟು ಜಾಗ ಅತಿಕ್ರಮಣವಾಗಿದ್ದು,ಪ್ರಸ್ತುತ ಉಳಿಕೆಯಾಗಿರುವ ಜಾಗವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.  ಕಾಳಿ ಸರೋವರದ ಅಭಿವೃದ್ಧಿಯಿಂದ ಇಡೀಗ್ರಾಮ ಅಭಿವೃದ್ಧಿಯಾಗಲಿದೆ ಎಂದರು.


ಕಳೆದ ಅವಧಿಯಲ್ಲಿ ಅಲ್ಲಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಿಸಿದ ಪರಿಣಾಮ ನೀರಿನ ಅಂತರ್ಜಲ ವೃದ್ದಿಯಾಗಿದೆ.  ಕೆರೆಗೆ ರಸ್ತೆಯ ಮೇಲೆ ಹರಿಯುವ ಮಲೀನ ನೀರು ಸೇರದಂತೆ ಸ್ವಚ್ಛವಾಗಿ ಉಳಿಸುವ ಕೆಲಸ ಗ್ರಾಮಸ್ಥರ ಮೇಲಿದೆ ಎಂದು ತಿಳಿಸಿದರು.


ಮಾಜಿ ಸಚಿವರಾದ ಬಿ. ರಮಾನಾಥ ರೈ  ಅವರು ಮಾತನಾಡಿ,ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕೆರೆ ಅಭಿವೃದ್ಧಿ ಕಾರ್ಯ ಶ್ಲಾಘನೀಯ ಎಂದು  ಹೇಳಿದರು.ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀಜಿಗಳಾದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನಗೈದರು.


ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್ ಸಭಾಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಡಾ.ಹೆಗ್ಗಡೆ ದಂಪತಿಯನ್ನು ಅಭಿನಂದಿಸಲಾಯಿತು. ಪೊಳಲಿ ಸೇವಾಸಹಕಾರಿ ಸಂಘದ  ಅಧ್ಯಕ್ಷ ವೆಂಕಟೇಶ್ ನಾವುಡ,ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್, ಗುತ್ತಿಗೆದಾರ ಅಬುಬಕ್ಕರ್,ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ,ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ,ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ.ಟಿ.ಸಾಲ್ಯಾನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಅಭಿಯಂತರ ಸುಶಾನ್ ,ಪಿಡಿಒ ವಸಂತಿ,ನಿವೃತ್ತ ಪಿಡಿಒ ಮಾಲಿನಿ ಉಪಸ್ಥಿತರಿದ್ದರು.


ಇದೇ ವೇಳೆ ಕೊಳದ ಬಳಿ  ಎಂಅರ್‌ಪಿಎಲ್ ಸಂಸ್ಥೆಯ ಸಿ.ಎಸ್ ಆರ್ ಅನುದಾನದಿಂದ ಸುಮಾರು ೬.೭೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಾಲಯವನ್ನು  ಎಂಅರ್‌ಪಿಎಲ್ ಸಂಸ್ಥೆಯ ಪ್ರಬಂಧಕರಾದ ಪ್ರದೀಪ್ ಕುಮಾರ್ ಉದ್ಘಾಟಿಸಿದರು.


ಶ್ರೀ.ಕೇ.ಧ.ಗ್ರಾ.ಯೋ.ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ಎಸ್.ಎಸ್.ಪ್ರಸ್ತಾವನೆಗೈದು,ನಮ್ಮೂರ ಲೆರೆಯೋಜನೆಯಡಿ ರಾಜ್ಯದಾದ್ಯಂತ 900 ಕೆರೆಗಳನ್ನು ಪುನಶ್ಚೇತನಗೊಳಿಸ ಲಾಗಿದ್ದು,ಲಕ್ಷಾಂತರಮಂದಿಗೆ ಅನುಕೋಲವಾಗಿದೆ.ಪರಿಣಾಮ 7ಲಕ್ಷ ನೀರಿನ ಸಾಂದ್ರತೆ ಹೆಚ್ಚಾಗಿದೆ ಎಂದರು.

ಕರಿಯಂಗಳ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ ,ಪ್ರಸ್ತಾವನೆಗೈದು ಕೆರೆಯ ಬಳಿ ವಿಶ್ರಾಂತಿಧಾಮ,ಉದ್ಯಾನವನ, ಬಯಲುರಂಗಮಂದಿರ ನಿರ್ಮಾಣಗೊಳಿಸುವ ಮೂಲಕ ಪ್ರವಾಸಿತಾಣವನ್ನಾಗಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು,ಈ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕರಿಯಂಗಳ ಗ್ರಾ.ಪಂ.ಉಪಾಧ್ಯಕ್ಷ ರಾಜುಕೋಟ್ಯಾನ್ ಅಭಿನಂದನಾ ಪತ್ರ ವಾಚಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಬಂಟ್ವಾಳ ಘಟಕದ ಯೋಜನಾಧಿಕಾರಿ ಜಯಾನಂದ ಪಿ.ವಂದಿಸಿದರು.
ಯೋಜನೆಯ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪೊಳಲಿಗೆ ಭೇಟಿ:
ಇದಕ್ಕು ಮೊದಲು ಡಾ.ವೀರೇಂದ್ರಹೆಗ್ಗಡೆ ದಂಪತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter