ಮೇ.11 ರಂದು ರಾಯಿಯಲ್ಲಿ ನೂತನ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಜ್ಞಾನ ಮಂದಿರದಲ್ಲಿ ಗುರುಗಳ ವಿಗ್ರಹ ಪ್ರತಿಷ್ಠಾಪನೆ
ಬಂಟ್ವಾಳ : ತಾಲೂಕಿನ ರಾಯಿ,ಕೊಯಿಲ,ಅರಳ ಗ್ರಾಮಗಳನ್ನೊಳಗೊಂಡ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ( ರಿ.) ವತಿಯಿಂದ ರಾಯಿಯಲ್ಲಿ ನೂತನವಾಗಿ ನಿರ್ಮಾಣವಾದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಜ್ಞಾನ ಮಂದಿರದಲ್ಲಿ ಗುರುಗಳ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ,ಅನ್ನಛತ್ರದ ಲೋಕಾರ್ಪಣೆ ಕಾರ್ಯಕ್ರಮ ಮೇ.11 ರಂದು ನಡೆಯಲಿದೆ

ಎಂದು ಪ್ರತಿಷ್ಠಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಮೇ.9 ಮತ್ತು 10 ರಂದು ವಿವಿಧ ವೈಧಿಕ ವಿಧಿವಿಧಾನಗಳು ನೆರವೇರಲಿದೆ ಎಂದು ಅವರು ತಿಳಿಸಿದರು.
ವಾಸ್ತು ಶಿಲ್ಪಿ ಶ್ರೀ ಪ್ರಮಲ್ಲ್ ಕುಮಾರ್ ಕಾರ್ಕಳ ಅವರ ಮರ್ಗದರ್ಶನದಲ್ಲಿ ಗುರುಗಳ ಜ್ಞಾನಮಂದಿರ ರೂಪುಗೊಂಡಿದ್ದು,ಮೇ. ೧೧ ರಂದು ಶ್ರೀ ಸದಾನಂದ ಶಾಸ್ತ್ರಿ ವೇಣೂರು ಅವರ ಪೌರೋಹಿತ್ಯ, ಶ್ರೀ ಲಕ್ಷ್ಮಣ ಶಾಂತಿ ಕುದ್ರೋಳಿ ಅವರ ನೇತೃತ್ವದಲ್ಲಿ ಗುರುಗಳ ಪಂಚಲೋಹದ ವಿಗ್ರಹ ಪ್ರತಿಷ್ಠಾಪನೆ,ಪಂಚಾಮೃತ ಅಬಿಷೇಕ,ಅಲಂಕಾರ ಪ್ರತಿಷ್ಠಾ ಹೋಮ,ಗುರು ನಾಮಾರ್ಚನೆ ನಡೆಯಲಿದೆ ಎಂದರು.
ನಾರಾಯಣ ಗುರುಗಳ ಪಕ್ಕಾ ಅನುಯಾಯಿ,ದೇಶಕಂಡ ಒರ್ವ ಪ್ರಮಾಣಿಕ ರಾಜಕಾರಣಿ,ಸಮುದಾಯದ ಹಿರಿಯರು,ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ ಅವರು ಜ್ಞಾನಮಂದಿರವನ್ನು ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಲಿದ್ದು,ಬೆಂಗಳೂರು ಆರ್.ಜಿ.ಗ್ರೂಪ್ ನ ಚೆಯರ್ ಮೆನ್ ಡಾ| ಬಿ.ಪ್ರಕಾಶ್ ಶೆಟ್ಟಿ ಅವರು ಸಮುದಾಯ ಭವನ ಉದ್ಘಾಟಿಸುವರು,ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅನ್ನಛತ್ರ ಉದ್ಘಾಟಿಸುವರು,ನಾರಾಯಣಗುರು ಚಿಂತನಾ ಸಮಾವೇಶವನ್ನು ರಾಜ್ಯ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದ ಅವರು ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಂಜೆ ಸಭಾಕಾರ್ಯಕ್ರಮ ಬಳಿಕ ತುಳು ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.
ಹೊರೆಕಾಣಿಕೆ ಮೆರವಣಿಗೆ :
ಮೇ. 9 ರಂದು ಗುರುಗಳ ವಿಗ್ರಹಕ್ಕೆ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆದು ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ನಾರಾಯಣಗುರು ಮಂದಿರಕ್ಕೆ ತರಲಾಗುವುದು, ಇಲ್ಲಿಂದ ಮಧ್ಯಾಹ್ನ 3 ಗಂಟೆಗೆ ಗುರುಗಳ ಮೂರ್ತಿಯನ್ನು ಹಾಗೂ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ವಾಹನಗಳ ಮೂಲಕ ಅಣ್ಣಳಿಕೆಯ ವೆರೆಗೆ ಸಾಗಲಿದ್ದು,ಅಲ್ಲಿಂದ ಶೋಭಾಯಾತ್ರೆಯಲ್ಲಿ ತೆರಳಲಿದೆ.ವಿವಿಧ ಭಜನಾ ತಂಡಗಳ ಕುಣಿತ ಭಜನೆಗಳು ಭಾಗವಹಿಸಲಿದೆ ಎಂದರು.
ನಾರಾಯಣಗುರುಗಳ ಚಿಂತನಾ ಸಮಾವೇಶ ಎಂಬುದು ಕೇವಲ ಜಾತಿಗೆ ಸೀಮಿತವಲ್ಲ,ಮಾನವೀಯತೆ,ಆಧ್ಯಾತ್ಮಿಕತೆ,ರಾಷ್ಟ್ರೀಯತೆ,ಸನಾತನ ಹಿಂದೂ ಧರ್ಮ,ಹಿಂದುತ್ವವನ್ನು ಪ್ರತಿಪಾದಿಸಿರುವ ಒರ್ವ ಕ್ರಾಂತಿಕಾರಿ ಸಂತ ಆಗಿರುವ ನಾರಾಯಣಗುರುಗಳ ತತ್ವ,ಆದರ್ಶ,ದೇಶದ ಬಗ್ಗೆ ಚಿಂತನೆಯನ್ನು ಸರ್ವಧರ್ಮಿಯರಿಗೂ ಪರಿಚಯಿಸುವುದು ಮತ್ತು ಮುಂದಿನ ಯುವಜನಾಂಗ ಇದನ್ನು ಅರಿತುಕೊಳ್ಳಬೇಕೆಂಬ ಉದ್ದೇಶವನ್ನಿರಿಸಿಕೊಂಡು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಭಾರತದ ಸಂಸ್ಕೃತಿ,ಪರಂಪರೆಯನ್ನು ಪ್ರತಿಯೋರ್ವರು ಅರಿತುಕೊಳ್ಳಬೇಕೆಂಬ ನಿಟ್ಟಿನಲ್ಲಿ ಶಿವಗಿರಿ ಮಾದರಿಯಲ್ಲಿ ಜ್ಞಾನಮಂದಿರವನ್ನು ನಿರ್ಮಿಸಲಾಗಿದೆ ಎಂದರು.
ಕಳೆದ 31 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಈ ಸಂಘ ಹಂತ,ಹಂತವಾಗಿ ಬೆಳೆದು ನಿಂತಿರುವ ಸುಸಂದರ್ಭದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣವಾದ ಜ್ಞಾನ ಮಂದಿರದಲ್ಲಿ ಗುರುಗಳ ವಿಗ್ರಹ ಪ್ರತಿಷ್ಠಾಪನೆ ಆಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಢಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಜೆ.ಎಸ್.ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು, ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ರಾಯಿಬೆಟ್ಟು, ಸಂಘಟನಾ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.