ಶ್ರೀ ಕ್ಷೇ. ಧ. ಗ್ರಾ. ಯೋ.ಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ವಾಸ್ತಲ್ಯ ಮನೆ ಹಸ್ತಾಂತರ
ಬಂಟ್ವಾಳ : ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕೊಳಂಬೆಗುರಿ ನಿವಾಸಿ ವಸಂತಿ ಎಂಬವರ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುಂಜಾಲಕಟ್ಟೆಯ ಸ್ವಯಂಸೇವಕರು ದುರಸ್ಥಿಗೊಳಿಸಿ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ರಿಪೇರಿಗಾಗಿ 40 ಸಾ.ರೂ. ಮಂಜೂರಾತಿಯಾಗಿದ್ದು, ಇದರ ಜೊತೆಗೆ ಶೌರ್ಯ ತಂಡವು ಶ್ರಮದಾನದ ಮೂಲಕ ಮನೆ ದುರಸ್ಥಿ ಕಾರ್ಯ ಮಾಡಿದರು.

ಮನೆಯ ಮೇಲ್ಚಾವಣಿ ಹಾನಿಯಾಗಿ ಬೀಳುವ ಹಂತದಲ್ಲಿದ್ದು ಮಳೆಗಾಲದಲ್ಲಿ ಸೋರುತ್ತಿತ್ತು, ಮನೆಯಲ್ಲಿ ತಾಯಿ ಮತ್ತು ಮಗಳು, ಹಾಗೂ ಐದನೇ ತರಗತಿಯ ಬಾಲಕ ಕೀರ್ತನ್ ಇದ್ದು,75 ರ ಹರೆಯದ ವಸಂತಿ ಅವರು ತೀರಾ ಬಡ ಕುಟುಂಬವಾಗಿದ್ದು,ಅವರು ಅನಾರೋಗ್ಯದಿಂದಲು ಬಳಲುತ್ತಿದ್ದರೆ ಇವರ ಪತ್ರಿ ಉಮಾವತಿ ಕೂಡ ಅನಾರೋಗ್ಯ ದಿಂದ ಬಳಲುತ್ತಿದ್ದು, ಸರೊಯಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.

ಇವರ ಮನೆಯ ಸಮಸ್ಯೆಯನ್ನು ಗಮನಿಸಿದ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಕಳೆದ ವರ್ಷ ಶೌಚಾಲಯವನ್ನು ನಿರ್ಮಿಸಿಕೊಟ್ಟಿತ್ತು. ಅಲ್ಲದೇ ನಡೆಯಲಾಗದ ಉಮಾವತಿ ಇವರಿಗೆ ವೀಲ್ ಚೇರ್ ಒದಗಿಸಿ ಅನುಕೂಲ ಮಾಡಿಕೊಡಲಾಗಿತ್ತು.
ಮನೆಯ ಇಬ್ಬರೂ ದುಡಿಯಲು ಸಾದ್ಯವಾಗದೊರುವ ಹಿನ್ನಲೆಯಲ್ಲಿ ಜೀವನ ನಿರ್ವಹಣೆಗಾಗಿ ಕಳೆದ 5 ವರ್ಷಗಳಿಂದ ಮಾಸಿಕವಾಗಿ ಒಂದು ಸಾ.ರೂ.ವಿನಂತೆ ಸಂಸ್ಥೆಯ ವತಿಯಿಂದ ಮಾಶಾಸನ ನೀಡಲಾಗುತ್ತಿದೆ.
ತಾಯಿ, ಮಗಳು ಇಬ್ಬರೂ ಕೂಡ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದಾಗಿ ಮಾತೃಶ್ರೀ ಅಮ್ಮನವರ ಆಶಯದಂತೆ ಪೌಷ್ಟಿಕ ಆಹಾರವನ್ನು ಯೋಜನೆ ವತಿಯಿಂದ ನೀಡಲಾಗುತ್ತಿದೆ.
ಮನೆ ತೀರಾ ದುಸ್ಥಿತಿಯಲ್ಲಿರುವುದನ್ನು ಮನಗಂಡ ಸಂಸ್ಥೆಯು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅನುದಾನ ಮಂಜೂರಾತಿ ಮಾಡಿಸಿರುವ ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರೇ ಶ್ರಮದಾನದ ಮೂಲಕ
ಮನೆಯ ದುರಸ್ಥಿ ಕಾರ್ಯವನ್ನು ಮಾಡಿದ್ದಾರೆ. ನಿರಂತರ 6 ದಿನಗಳ ಕಾಲ ಶ್ರಮದಾನದ ಮೂಲಕ ವಸಮಕತಿ ಅವರ ಮನೆಯ ಮೇಲ್ಚಾವಣಿ ಸರಿಪಡಿಸಿ, ಬಾಗಿಲು, ಕಿಟಕಿ,ಹಂಚು ಅಳವಡಿಕೆಯನ್ನು ಮಾಡಿರುತ್ತಾರೆ. ಮನೆಯ ಸುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯನಡೆಸಿ ಶುಚಿಗೊಳಿಸಿರುತ್ತಾರೆ.
ವಲಯದ ಮೇಲ್ವಿಚಾರಕರಾದ ಸವಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೃತಿ ಇವರು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು. ಸ್ವಯಂಸೇವಕರಾದ
ಶಶಿಧರ, ಸುಂದರ, ರಮೇಶ, ಮೋಹನ್ ಕುಶಾನಂದ , ರಘುವೀರ್ , ಭೂಮಿಕಾ
ಆಶಾಲತಾ, ಜಯಲಕ್ಷ್ಮಿ, ಪ್ರಮೋದ್ ಪೂಜಾರಿ, ಶೋಭಾ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಸ್ಥಳೀಯರಾದ ನಾಗೇಶ್, ರಾಜೇಶ್,
ಯಶೋಧರ್, ವಸಂತ ಇವರು ಶ್ರಮದಾನದಲ್ಲಿ ತೊಡಗಿಕೊಂಡಿದ್ದರು.
ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ, ಪಿಲಾತಬೆಟ್ಟು ಗ್ರಾಮದ ಸೇವಾ ಪ್ರತಿನಿಧಿ ಅಮೃತ ಎಸ್ ಅವರು ಅಗಮಿಸಿ ಶೌರ್ಯ ತಂಡದ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.
ಮನೆಯ ದುರಸದಥಿ ಕಾರ್ಯ ಪೂರ್ಣಗೊಂಡ ಹಿನ್ನಲೆಯಲ್ಲಿ
ಇದೀಗ ವೈಧಿಕ ವಿಧಾನವನ್ನು ಮೆರವೇರಿಸಿ
ಶ್ರೀ ಮಂಜುನಾಥ ಸ್ವಾಮಿ ದೇವರ ಫೋಟೋ ಜೊತೆ ವಾಸ್ತಲ್ಯ ಕಿಟ್ ನೀಡಿ ವಾಸ್ತಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ಬಂಟ್ವಾಳ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಪ್ರಕಾಶ್, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಿ ನಾರಾಯಣ ಹೆಗ್ಡೆ, ನೆಲ್ವಿಸ್ಟರ್ ಪಿಂಟೋ, ಪೂಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಸವಿತಾ ಎ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶೃತಿ, ಪಿಲಾತಬೆಟ್ಟು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅಮೃತಾ, ಶೌರ್ಯ ಘಟಕದ ಪ್ರತಿನಿಧಿ ಮೋಹನ್ ಸಾಲಿಯನ್, ಶೌರ್ಯ ಘಟಕ ಸಂಯೋಜಕ ಗೋವಿಂದ, ಶೌರ್ಯ ಘಟಕದ ಸದಸ್ಯರುಗಳು,ಒಕ್ಕೂಟದ ಅಧ್ಯಕ್ಷರುಗಳಾದ ಗಂಗಾಧರ ಮತ್ತು ಜಯಲಕ್ಷ್ಮಿ, ಪದಾಧಿಕಾರಿಗಳಾದ ವಿಜಯ, ಆಶಾ ಶೆಟ್ಟಿ, ರವಿ ಮೊದಲಾದವರು ಉಪಸ್ಥಿತರಿದ್ದರು.