ಬಂಟ್ವಾಳ: ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಬಂಟ್ವಾಳ ಹಾಗೂ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡ್ ಇವರ ಆಶ್ರಯದಲ್ಲಿ ಒಪ್ಟಿಕ್ ವರ್ಲ್ಡ್ ಕಣ್ಣಿನ ಕ್ಲಿನಿಕ್ ಮತ್ತು ಒಪಿಕಲ್ಸ್ ಇವರ ಸಹಕಾರದೊಂದಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ನಡೆಯಿತು.
ಬಿಎಂಎಸ್ ನ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು, ಲಯನ್ಸ್ ಸೇವಾ ಮಂದಿರದ ಅಧ್ಯಕ್ಷ ರಾಧಾಕೃಷ್ಣ,ಬಿಎಂಎಸ್ ಬಂಟ್ವಾಳ ಘಟಕದ ಗೌರವಾಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ, ಬಿಎಂ ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾರಾಯಣ ಪೂಜಾರಿ,ಬಿಎಂಎಸ್ ಬಂಟ್ವಾಳ ಆಟೋ ಚಾಲಕ,ಮಾಲಕರ ಸಂಘದ ಅಧ್ಯಕ್ಷವಿಶ್ವನಾಥ ಚಂಡ್ತಿಮಾರ್, ಕಣ್ಣಿನ ವೈದ್ಯರಾದ ಡಾ. ಮರೀಟಾ ಹಾಗೂ ಡಾ ಸಿಜೋ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಬಿಎಂಎಸ್ ಸದಸ್ಯರಾದ ನಾರಾಯಣ ಪೂಜಾರಿ. ಚೇತನ್ ಪಂಚಮಿ. ಕೃಷ್ಣಪ್ಪ ನಾಟಿ. ಕೇಶವ ಇರ್ವತ್ತೂರು ಇವರಿಗೆ ಬಂಟ್ವಾಳ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ವಸಂತ್ ಕುಮಾರ್ ಮಣಿಹಳ್ಳ, ಸ್ವಾಗತಿಸಿದರು. ಶ್ರೀಕಾಂತ್ ವಂದಿಸಿದರು.