Published On: Fri, Dec 20th, 2024

ಬಂಟ್ವಾಳ: ದಿವಂಗತ ಗೋಪಾಲ ಮೆಂಡನ್ ಸ್ಮರಣಾರ್ಥವಾಗಿ ಬಸ್ ನಿಲ್ದಾಣ ನಿರ್ಮಾಣ

ಬಂಟ್ವಾಳ: ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಸಮೀಪದ ಮಂಜೋಡಿ ನಿವಾಸಿ ದಿವಂಗತ ಗೋಪಾಲ ಮೆಂಡನ್ ಅವರ ಸ್ಮರಣಾರ್ಥ ಅವರ ಮಕ್ಕಳು ಸಿದ್ದಕಟ್ಟೆ -ವೇಣೂರು ರಸ್ತೆಯ ಮಂಚಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ಸು ತಂಗುದಾಣವನ್ನು‌ಲೋಕಾರ್ಪಣೆ ಮಾಡಲಾಯಿತು.

ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ ಕುಲಾಲ್ ತಂಗುದಾಣದ ಉದ್ಘಾಟನೆಗೈದರು. ಗ್ರಾಮ ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಪೋಡುಂಬ,ಸಿದ್ದಕಟ್ಟೆ ಹಾ. ಉ. ಸ. ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ,ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾನಂದ ರೈ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಮಂದಾರತಿ ಶೆಟ್ಟಿ, ವೀರಪ್ಪ ಪರವ, ದೇವರಾಜ್ ಸಾಲಿಯನ್, ಮಾಜಿ ನಿರ್ದೇಶಕರಾದ ಸೀತಾರಾಮ ಶೆಟ್ಟಿ, ದಿ. ಗೋಪಾಲ ಮೆಂಡನ್ ಮಕ್ಕಳಾದ ಮಹಾಬಲ ಶೆಟ್ಟಿ, ಕುಶಲ ಶೆಟ್ಟಿ, ಲೀಲಾ ಶೆಟ್ಟಿ, ಜಗದೀಶ್ ಶೆಟ್ಟಿ, ಹರಿಣಾಕ್ಷಿ ಶೆಟ್ಟಿ ಹಾಗೂ ಕುಟುಂಬಸ್ಥರು,ಪ್ರಮುಖರಾದ ರತೀಶ್ ಶೆಟ್ಟಿ ಕೊನೆರಬೆಟ್ಟು, ಡಾ.ಶ್ರೀಧರ್ ಶೆಟ್ಟಿ ,ರತ್ನಾಕರ್ ಶೆಟ್ಟಿ ಹೊಕ್ಕಾಡಿ, ಪುಷ್ಪರಾಜ್ ಶೆಟ್ಟಿ,ಉಮೇಶ್ ಪೂಜಾರಿ ಹಿಂಗಾಣಿ ಉಪಸ್ಥಿತರಿದ್ದರು. ಗುಣಪಾಲ ಶೆಟ್ಟಿ ಕರ್ಪೆ ಸ್ವಾಗತಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter