ಬಂಟ್ವಾಳ: ಶಿಕ್ಷಣವು ಮಾನವನನ್ನು ಎಲ್ಲಾ ರೀತಿಯ ಬಂಧನದಿಂದ ಮುಕ್ತಗೊಳಿಸುವ ಏಕೈಕ ದಾರಿ
ಬಂಟ್ವಾಳ : ಶಿಕ್ಷಣವು ಮಾನವನನ್ನು ಎಲ್ಲಾ ರೀತಿಯ ಬಂಧನದಿಂದ ಮುಕ್ತಗೊಳಿಸುವ ಏಕೈಕ ದಾರಿಯಾಗಿದೆ. ಎಲ್ಲಾ ಮಾನವನೂ ಸಮಾನ, ಮಾನವರೆಲ್ಲರೂ ವಿಕಾಸಗೊಳ್ಳಬೇಕು ಎನ್ನುವ ಕಾಳಜಿ ನಾರಾಯಣಗುರುಗಳಲ್ಲಿತ್ತು. ಸಮಾಜ ಸುಧಾರಣೆಗಾಗಿ ನಾರಾಯಣ ಗುರುಗಳು ಸಮನ್ವಯದ ಒಳಗೊಳ್ಳುವಿಕೆಯ ಹಾದಿಯಾಗಿತ್ತು. ತಳಸಮುದಾಯದ ಸಾಮಾಜಿಕ, ಆರ್ಥಿಕ ಸುಧಾರಣೆಗೆ ನಾರಾಯಣಗುರು ಚಿಂತನೆ ಪ್ರಣಾಳಿಕೆಯಂತಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಂಜತ್ತೂರು ಯುವವಾಹಿನಿ ಬಂಟ್ವಾಳ ಘಟಕದ ವಿಧ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕುಮಾರ್ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 24 ನೇ ಮಾಲಿಕೆಯಲ್ಲಿ ಅವರು ಗುರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮಧ್ವ, ಮಧುಸೂದನ್ ಮಧ್ವ, ಸಂಘಟನ ಕಾರ್ಯದರ್ಶಿ ಉದಯ್ ಮೆನಾಡು,ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ,ಸದಸ್ಯರಾದ, ಶ್ರವಣ್ ಬಿ.ಸಿರೋಡ್,ಸಚಿನ್,ಅಜಯ್,ಯತೀಶ್ ಬೊಳ್ಳಾಯಿ, ಜಗನ್ನಾಥ್ ಸುವರ್ಣ ಕಲ್ಲಡ್ಕ,ಶೈಲೇಶ್ ಕುಚ್ಚಿಗುಡ್ಡೆ, ಅರ್ಜುನ್ ಅರಳ, ಸುನಿತಾ ಮಾರ್ನಬೈಲ್,ಸುಲತಾ ಬಿ.ಸಿರೋಡ್, ನಯನಾ ಜಯಾ ಪಚ್ಚಿನಡ್ಕ, ಜಗದೀಶ್ ತುಂಬೆ, ಜಯಾ ಪಚ್ಚಿನಡ್ಕ, ತೃಪ್ತಿ ಪಚ್ಚಿನಡ್ಕ,ಯಶೋಧರ ಕಡಂಬಳಿಕೆ, ಸಾನಿಕ ತುಂಬೆ, ವಿಘ್ನೇಶ್ ಬೊಳ್ಳಾಯಿ, ಗಣೇಶ್ ಬಂಗೇರ,ಶೈಲಜಾ ರಾಜೇಶ್, ಆಶಿಷ್ ಪೂಜಾರಿ,ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.