ಮೈಸೂರು ದಸರಾದ ಜಂಬೂಸವಾರಿ ಮರೆವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾದ ಜಂಬೂಸವಾರಿ ಮರೆವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರು, ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. ಪುಷ್ಪಚಾರಣೆ ಮೂಲಕ ನಾಡ ದೇವತೆ ಗೌರವ ಸಲ್ಲಿಸಿದರು. ಈ ವೇಳೆ ಅನೇಕ ಜಿಲ್ಲೆಯ ಟ್ಯಾಬೋಗಳು ಅದರಲ್ಲೂ ದಕ್ಷಿಣ ಕನ್ನಡದ ಕಂಚಳ ಹಾಗೂ ದೈವ ಟ್ಯಾಬೋಗಳು ಗಮನ ಸೆಳೆಯಿತು.
ಅಧಿದೇವತೆ ಚಾಮುಂಡಿಯನ್ನ ಅಭಿಮನ್ಯು ಹೊತ್ತಿದ್ದಾನೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಲಿದೆ.