ಉಡುಪಿ: ಈಜಿಕೊಂಡು ಹೊಳೆ ದಾಟಿ ವಿದ್ಯುತ್ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ ಪ್ರಮೋದ್

ಹೆಬ್ರಿ: ಮೆಸ್ಕಾಂ ಸಿಬ್ಬಂದಿಗಳು ಒಂದು ರೀತಿ ದೇಶ ಕಾಯುವ ಯೋಧರಂತೆ, ಯಾವ ಸಮಯದಲ್ಲೂ, ಎಲ್ಲದರೂ, ಸೇವೆ ನೀಡಲು ಮುಂದಾಗುತ್ತಾರೆ. ಇದೀಗ ಇದಕ್ಕೆ ಸಾಕ್ಷಿ ಹೆಬ್ರಿಯ ಲೈನ್ ಮ್ಯಾನ್. ಈ ಬಗ್ಗೆ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದನ್ನು ಅರಿತ ಸಿಬ್ಬಂದಿ ಹಗ್ಗ ಹಿಡಿದು ಹೊಳೆ ದಾಟಿ ದುರಸ್ತಿ ಕಾರ್ಯ ಮಾಡಿದ್ದಾರೆ. ಇದೀಗ ಇವರ ಈ ಕಾರಣಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿ ಗ್ರಾಮದಿಂದ ಸ್ಥಳೀಯರು ಕರೆ ಮಾಡಿ ನಮ್ಮ ಊರಿಗೆ ಕರೆಂಟ್ ಇನ್ನು ಬಂದಿಲ್ಲ ಎಂದು ಮೆಸ್ಕಾಂಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಸಮಸ್ಯೆಗೆ ಪರಿಹಾರ ನೀಡಲು ಸ್ಥಳಕ್ಕೆ ಧಾವಿಸಿ, ತಕ್ಷಣವೇ ಹೊಳೆ ದಾಟಿ ಸಮಸ್ಯೆಯನ್ನು ಸರಿ ಮಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಮೋದ್ ದಾವಣಗೆರೆಯ ಚನ್ನಗಿರಿ ಮೂಲದವರು, ಅರೆಕಾಲಿಕ ಸಹಾಯಕ ಸುಧೀರ್ ಅವರೊಂದಿಗೆ ಈಜಿಕೊಂಡು ಹೊಳೆ ದಾಟಿ ಹಾನಿಗೀಡಾದ ಲೈನ್ ಸರಿಪಡಿಸಿದ್ದಾರೆ. ಹಲವಾರು ದಿನಗಳಿಂದ ವಿದ್ಯುತ್ ಇಲ್ಲದೆ ಕಂಗೆಟ್ಟಿದ್ದ ಜನರಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದ್ದಾರೆ.