ಬಂಟ್ವಾಳ: ಪೊಳಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಸ್ವಚ್ಛತಾ ಅಭಿಯಾನ

ಪೊಳಲಿ: ಬ್ಯಾಂಕ್ ಆಫ್ ಬರೋಡಾ ಪೊಳಲಿ ಶಾಖೆಯ ವತಿಯಿಂದ ಇಂದು ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು. ಈ ಮೂಲಕ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ. ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಮೂಲಕ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲೀಡ್ ಬ್ಯಾಂಕ್ ಆದೇಶದ ಮೆರೆಗೆ ಎಲ್ಲ ಬ್ಯಾಂಕ್ ಈ ಅಭಿಯಾನದಲ್ಲಿ ಭಾಗವಹಿಸಲಿದೆ ಎಂದು ಪ್ರಾದೇಶಿಕ ಕಚೇರಿ ಮಂಗಳೂರು ಇದರ ಸಿಬ್ಬಂದಿ ಪ್ರಜ್ವಲ್ ಜೈನ್ ಮಾಹಿತಿ ನೀಡಿದರು.

ಇನ್ನು ಅಭಿಯಾನಕ್ಕೆ ಕರಿಯಂಗಳ ಗ್ರಾಮ ಪಂಚಾಯತ್ ಸಹಕಾರವನ್ನು ನೀಡಿದೆ. ಇನ್ನು ಅಭಿಯಾನದಲ್ಲಿ ಬ್ಯಾಂಕ್ ಆಫ್ ಬರೋಡ ಪೊಳಲಿ ಶಾಖೆ ವ್ಯವಸ್ಥಾಪಕ ನಿತೀನ್ ರಾವ್ ಹಾಗೂ ಬ್ಯಾಂಕ್ನ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಿರು. ಮತ್ತು ಗ್ರಾಮ ಪಂಚಾಯತ್ನ ಕಾರ್ಯದರ್ಶಿ ಭಾರತಿ ರಾಜರಾಜೇಶ್ವರಿ ಮಹಿಳಾ ಮಂಡಲಿಯ ಸದಸ್ಯರು, ಪೊಳಲಿ ಭಾಗದ ಗ್ರಾಮಸ್ಥರು ಕೂಡ ಅಭಿಯಾನದಲ್ಲಿ ಭಾಗವಹಿಸಿದರು.