Published On: Wed, Sep 25th, 2024

ಬಂಟ್ವಾಳ: ಪೊಳಲಿ ಬ್ಯಾಂಕ್​​ ಆಫ್ ಬರೋಡಾ ವತಿಯಿಂದ ಸ್ವಚ್ಛತಾ ಅಭಿಯಾನ

ಪೊಳಲಿ: ಬ್ಯಾಂಕ್​​ ಆಫ್ ಬರೋಡಾ ಪೊಳಲಿ ಶಾಖೆಯ ವತಿಯಿಂದ ಇಂದು ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು. ಈ ಮೂಲಕ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ. ಸ್ವಚ್ಛ ಭಾರತ್​​​​ ಅಭಿಯಾನದ ಅಡಿಯಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಮೂಲಕ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲೀಡ್​​​ ಬ್ಯಾಂಕ್​ ಆದೇಶದ ಮೆರೆಗೆ ಎಲ್ಲ ಬ್ಯಾಂಕ್​​​ ಈ ಅಭಿಯಾನದಲ್ಲಿ ಭಾಗವಹಿಸಲಿದೆ ಎಂದು ಪ್ರಾದೇಶಿಕ ಕಚೇರಿ ಮಂಗಳೂರು ಇದರ ಸಿಬ್ಬಂದಿ ಪ್ರಜ್ವಲ್ ಜೈನ್​​​​ ಮಾಹಿತಿ ನೀಡಿದರು.

ಇನ್ನು ಅಭಿಯಾನಕ್ಕೆ ಕರಿಯಂಗಳ ಗ್ರಾಮ ಪಂಚಾಯತ್​​​ ಸಹಕಾರವನ್ನು ನೀಡಿದೆ. ಇನ್ನು ಅಭಿಯಾನದಲ್ಲಿ ಬ್ಯಾಂಕ್​​ ಆಫ್ ಬರೋಡ ಪೊಳಲಿ ಶಾಖೆ ವ್ಯವಸ್ಥಾಪಕ ನಿತೀನ್​​ ರಾವ್​​​ ಹಾಗೂ ಬ್ಯಾಂಕ್​​ನ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಿರು. ಮತ್ತು ಗ್ರಾಮ ಪಂಚಾಯತ್​​​ನ ಕಾರ್ಯದರ್ಶಿ ಭಾರತಿ ರಾಜರಾಜೇಶ್ವರಿ ಮಹಿಳಾ ಮಂಡಲಿಯ ಸದಸ್ಯರು, ಪೊಳಲಿ ಭಾಗದ ಗ್ರಾಮಸ್ಥರು ಕೂಡ ಅಭಿಯಾನದಲ್ಲಿ ಭಾಗವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter