Published On: Mon, Sep 2nd, 2024

ಉಡುಪಿ : ಕೆರಾಡಿಯ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ ಜೂನಿಯರ್ ಎನ್​ಟಿಆರ್ ರಿಷಬ್ ಶೆಟ್ಟಿ

ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಜ್ಯೂನಿಯರ್ ಎನ್ ಟಿಆರ್, ರಿಷಬ್ ಶೆಟ್ಟಿ ಅವರು ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯವೊಂದು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಮ್ಮನ ಆಸೆ ತೀರಿಸಲು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜ್ಯೂ.ಎನ್ ಟಿ ಆರ್ ಅವರು, ಗೆಳೆಯ ರಿಷಬ್ ಜೊತೆ ತನ್ನ ತಾಯಿಯ ತವರು ಕುಂದಾಪುರದಲ್ಲಿ ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ದೇವಾಲಯದ ಪ್ರಾಕೃತಿಕ ರಮಣೀಯತೆಯನ್ನು ನೋಡಿ ಜ್ಯೂ.ಎನ್ ಟಿ ಆರ್ ಮಾರುಹೋಗಿದ್ದಾರೆ. ಅವರ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್, ನಟ ಪಮೋದ್ ಶೆಟ್ಟಿ ಕೂಡ ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter