ವಗ್ಗ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಸ್ವಚ್ಛತಾ ಕಾರ್ಯ
ಬಂಟ್ವಾಳ : ಕೆಳಗಿನ ವಗ್ಗ ದಿಂದ ಮಾಂಗಜೆ ವರೆಗೆ ರಸ್ತೆಯ ಇಕ್ಕಡೆಗಳಲ್ಲಿ ಗಿಡ ಗಂಟೆಗಳು ಬೆಳೆದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆವಾಗುದನನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನದ ಮೂಲಕ ಬೆಳೆದಂತ ಗಿಡ ಗಂಟಿಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಕಾವಳಪಡುರು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕಿ ರೇಖಾ ಪಿ, ವಗ್ಗ ವಲಯ ಮೇಲ್ವಿಚಾರಕರಾಕಿ ಸವಿತಾ, , ಶೌರ್ಯ ಘಟಕದ ಸದಸ್ಯರುಗಳಾದ ಸಂಪತ್ ಶೆಟ್ಟಿ, ಮಹಾಬಲ ರೈ ನಾರಾಯಣಶೆಟ್ಟಿ, ಲಕ್ಷ್ಮಣ ,ಅಶೋಕ, ನಾರಾಯಣ ಪೂಜಾರಿ , ಆನಂದ, ವಸಂತ, ಪವಿತ್ರ , ಜಯಮಾಲಾ, ಪ್ರಿಯಾಂಕ, ರೋಹಿತ್ , ಪವನ್, ದಿನೇಶ್,ಸೇವಾ ಪ್ರತಿನಿಧಿಗಳಾದ ರಜನಿ, ಸುಮಿತ್ರ ಮೊದಲಾದವರು ಭಾಗವಹಿಸಿದ್ದರು.