ಗುಡ್ಡೆಯಂಗಡಿ ಹಾಲು ಉ. ಸ. ಸಂಘಕ್ಕೆ ಆಯ್ಕೆ
ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ದ ಆಡಳಿತ ಮಂಡಳಿಗೆ ಬಡಗಬೆಳ್ಳೂರು ಗ್ರಾಮದ ಅಂಬೋಡಿಮಾರ್ ನಂದರಾಮ ರೈ ಅಧ್ಯಕ್ಷರಾಗಿ ಹಾಗೂ ಸುಂದರ ಶೆಟ್ಟಿತಂಕಿಹಿತ್ಲು ಅವರು ಉಪಾಧ್ಯಕ್ಷರಾಗಿಯು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಸದಸ್ಯರಾಗಿ ವೇದಾನಂದ ಬಂಗೇರಬೆಟ್ಟು ,ಸುಬ್ರಹ್ಮಣ್ಯ ಮಯ್ಯ. ಬಡಗಬೆಳ್ಳೂರು, ಶಿವಪ್ಪ ಮೂಲ್ಯ ನೆಲ್ಲಿಮಾರ್ , ಸುಂದರ ಭಟ್ ಅರಳ, ಸತೀಶ್ ಬಂಗೇರಬೆಟ್ಟು ,ಬೇಬಿರಾಜ್ ಅಂಬೋಡಿಮಾರ್ , ಮಲ್ಲಿಕಾ ಹೆಗ್ಡೆ ನೆಲ್ಲಿಮಾರ್,ಲೀಲಾ ಕೊಡಿಮಜಲು,ಗುಣ ಮುಗುಳ್ಯ ಅರಳ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಗೋಪಾಲ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ.ಸಿಬ್ಬಂದಿಗಳು ಸಹಕರಿಸಿದರು.
ನಂದರಾಮ ರೈ ಅವರು ಸತತ ನಾಲ್ಕನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ