Published On: Tue, Jul 23rd, 2024

ಬಂಟ್ವಾಳ ಗ್ರಾಮಾಂತರ ಆರಕ್ಷಕ ಠಾಣೆಯ ರಸ್ತೆ ಭಾಗದಲ್ಲಿರುವ ಆವರಣಗೋಡೆ ಕುಸಿತ

ಬಂಟ್ವಾಳ : ಕಸ್ಬಾ ಗ್ರಾಮದ ಕೆಳಗಿನಪೇಟೆಯಲ್ಲಿರುವ ಗ್ರಾಮಾಂತರ ಆರಕ್ಷಕ ಠಾಣೆಯ ಮಹಮ್ಮದಾಲಿ ರಸ್ತೆ ಭಾಗದಲ್ಲಿರುವ ಆವರಣಗೋಡೆಯು ಕುಸಿದಿದ್ದು, ಇನ್ನೊಂದು ಭಾಗವು ಕುಸಿಯುವ ಭೀತಿಯಿದೆ.


ಈ ಭಾಗದಲ್ಲಿ ಹೋಗಿಬರುವ ಶಾಲಾ ಮಕ್ಕಳ ಪೋಷಕರು ಆತಂಕದಿಂದಿದ್ದು, ಈ ಪರಿಸ್ಥಿತಿಯನ್ನರಿತ ಮಾಜಿ ಸಚಿವರಾದ  ಬಿ.ರಮಾನಾಥ ರೈಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರಲ್ಲದೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗಳಿಗೆ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತು ಚರಂಡಿ ವ್ಯವಸ್ಥೆಯ ಬಗ್ಗೆಯು ರಮಾನಾಥ ರೈಯವರ ಗಮನಕ್ಕೆ ತರಲಾಯಿತು.
ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪರಸಭಾ ನಾಮ ನಿರ್ದೇಶಿತ ಸದಸ್ಯ ರಿಯಾಝ್, ಮಸೀದಿ ಮತ್ತು ತೌಹೀದ್ ಶಾಲಾ ಆಡಳಿತ ಸಮಿತಿ ಸದಸ್ಯರು, ಸ್ಥಳೀಯರಾದ ಇಸ್ಮಾಯಿಲ್,ಮುಸ್ತಫ,ಶೌಕತ್ ಅಲಿ,ಬಶೀರ್,ಹಿಫಾಝತ್ ಮೊದಲಾದವರು ಹಾಜರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter