Published On: Thu, Jul 4th, 2024

ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಮನ್ವಯ ಸಮಿತಿಯಿಂದ ಶೃದ್ದಾಂಜಲಿ ಸಭೆ

ಬಂಟ್ವಾಳ;  ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ,ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಮಾಜಿ ಉಪಾಧ್ಯಕ್ಷರಾದ  ಸಯ್ಯದ್‌ ಅಬ್ದುಲ್‌ ಕರೀಂ ರವರ  ನಿಧನದ ಹಿನ್ನಲೆಯಲ್ಲಿ‌ನುಡಿ ನಮನ ಕಾರ್ಯಕ್ರಮವು ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್‌ ನ ಸಭಾಂಗಣದಲ್ಲಿ  ಸಂಘಟನೆಯ ಅಧ್ಯಕ್ಷರಾದ ಮೋಹನ್‌ ಶೆಟ್ಟೆ ಪಂಜಿಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಮಾಜಿ ಅಧ್ಯಕ್ಷರಾದ  ಬಿ.ಎಂ.ಪ್ರಭಾಕರ ದೈವಗುಡ್ಡೆ ಯವರು ಸಯ್ಯದ್‌ ಅಬ್ದುಲ್‌ ಕರೀಂ ಅವರು  ಒರ್ವ ಜಾತ್ಯಾತೀತ ಮನೋಭಾವದ ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು.  ಸಮಾಜದಲ್ಲಿ ನಡೆಯುವ ಆಗುಹೋಗುಗಳ ಕುರಿತಾಗಿ ಉತ್ತಮ ಕಾಳಜಿ ಹೊಂದಿದ್ದರು.  ಜನಪರ ಚಳುವಳಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಶೋಷಣೆ ದಬ್ಬಾಳಿಕೆಯ ವಿರುದ್ಧ  ಧ್ವನಿ ಎತ್ತುತ್ತಿದ್ದರಲ್ಲದೆ ಉತ್ತಮ ರಾಜಕೀಯ ವಿಮರ್ಷಕರು ಕೂಡ ಆಗಿದ್ದರು. ಸಯ್ಯದ್‌ ರವರ ಅಗಲಿಕೆಯಿಂದ ಸಮಾನ ಮನಸ್ಕ  ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್‌, ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ  ನುಡಿ ನಮನದ  ಮೂಲಕ ಶ್ರದ್ದಾಂಜಲಿ ಅರ್ಪಿಸಿದರು. ಸಂಘಟನೆಯ ಗೌರವಾಧ್ಯಕ್ಷ ರಾಜಾ ಚಂಡ್ತಿಮಾರ್‌ ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಬಂಟ್ವಾಳ್‌ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter