Published On: Thu, Jun 27th, 2024

ಮನೆಮುಂಭಾಗದ ತಡೆಗೋಡೆ ಕುಸಿತ,ಶಾಸಕ ನಾಯ್ಕ್ ಭೇಟಿ

ಬಂಟ್ವಾಳ:  ಪುರಸಭಾ ವ್ಯಾಪ್ತಿಯ ವಿವಿದೆಡೆಯಲ್ಲಿ ಗುರುವಾರ ತಡೆಗೋಡೆ,ಅವರಣಗೋಡೆ ಕುಸಿದ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.0ಬಂಟ್ವಾಳ ಬೈಪಾಸ್ ನ ಹೊಸ್ಮಾರು ಎಂಬಲ್ಲಿ ಮನೆಯಂಗಳ ಮುಂಭಾಗದ ತಡೆಗೋಡೆಯೊಂದು ಕುಸಿದು ಬಿದ್ದರೆ,ಇದರ ಪಕ್ಕವೇ ದೈವ ಗುಡ್ಡೆ ಎಂಬಲ್ಲಿ ಅವರಣಗೋಡೆ ಕುಸಿದಿದ್ದು ಎರಡು ಮನೆಗಳು ಅಪಾಯದಚಿನಲ್ಲಿದೆ.


ಈ ಎರಡೂ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸ್ಮಾರಿನಲ್ಲಿ ಅರ್ಧ ಭಾಗ ತಡೆಗೋಡೆ ಕುಸಿದಿದ್ದು, ಉಳಿದ ಅರ್ಧ ಭಾಗ ತಡೆಗೋಡೆ ಕುಸಿಯುವ ಹಂತದಲ್ಲಿದ್ದು,ಪರಿಣಾಮ ಮನೆ ಅಪಾಯಕ್ಕೆ ಸಿಲುಕಿದೆ.


ದೈವ ಗುಡ್ಡೆಯಲ್ಲಿ ಅವರಣಗೋಡೆ ಕುಸಿದಿರುವುದರಿಂದ ಎರಡು ಮನೆಗಳಿಗೂ ಹಾನಿಯಾಗುವ ಸಂಭವಿದ್ದು,ಪ್ರಾಥಮಿಕ ಹಂತದಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು  ಮತ್ತು ಸಮಸ್ಯೆಯಿಂದ ಸಿಲುಕಿರುವ ಮನೆಗಳಿಗೆ  ತಾತ್ಕಾಲಿಕವಾಗಿ ಪರಿಹಾರ ಕಾರ್ಯಕೈಗೊಳ್ಳುವಂತೆಯು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಸರಕಾರದಿಂದ  ಪರಿಹಾರ ಸಿಗುವ ನಿಟ್ಟಿನಲ್ಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗಂಗಾಧರ ಪೂಜಾರಿ,ಪ್ರಮುಖರಾದ ದೇವದಾಸ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, , ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರರಿದ್ದರು.


ತಹಶೀಲ್ದಾರರ ಭೇಟಿ:

ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಅವರು ಎರಡೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಕಂದಾಯ ಇಲಾಖೆಯ ಜನಾರ್ದನ್ ಮೊದಲಾದವರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter