Published On: Wed, Jun 19th, 2024

ಬಜಪೆ ಹೆದ್ದಾರಿ ಕಾಮಗಾರಿ : ಸಂಚಾರ ಮಾರ್ಪಾಡು 

ಮಂಗಳೂರು :-  ಮಂಗಳೂರು ತಾಲೂಕಿನ ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ 67 ರ ಕಿ. ಮೀ 19.00 ರಿಂದ 19.50 ವರೆಗೆ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ವೇಳೆ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗದಲ್ಲಿ ಜೂನ್ 11ರಿಂದ ಅಕ್ಟೋಬರ್ 10 ರ ಮೂರು ತಿಂಗಳುಗಳ ಕಾಲ ಸಂಚಾರ ಮಾರ್ಪಾಡು ಮಾಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅಧಿಸೂಚನೆಯನ್ನು ಹೊರಡಿಸಿದ್ದಾರೆ. 

 ಮಂಗಳೂರಿನಿಂದ ಕಟೀಲ್ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಕಿನ್ನಿಪದವು ಜಂಕ್ಷನ್‍ನಲ್ಲಿ ಬಲತಿರುವು ಪಡೆದುಕೊಂಡು ಹಳೆ ವಿಮಾನ ನಿಲ್ದಾಣ ರಸ್ತೆ ಮುರ ಜಂಕ್ಷನ್ ಎಡ ತಿರುವು – ಬಜಪೆ ಹಳೆ ಪೊಲೀಸ್ ಸ್ಟೇಷನ್ ಎಡ ತಿರುವು – ಬಜಪೆ ಚರ್ಚ್ ಜಂಕ್ಷನ್ ರಸ್ತೆ ಬಲ ತಿರುವು ಪಡೆದು ಕಟೀಲು ಕಡೆಗೆ ಸಂಚರಿಸುವುದು.

 ಮಂಗಳೂರಿನಿಂದ ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಕಿನ್ನಿಪದವು ಜಂಕ್ಷನ್‍ನಲ್ಲಿ ಬಲ ತಿರುವು ಪಡೆದುಕೊಂಡು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಮುರ ಜಂಕ್ಷನ್ ನಲ್ಲಿ ಎಡ ತಿರುವು ಪಡೆದುಕೊಂಡು ಬಜಪೆ ಹಳೆ ಪೆÇಲೀಸ್ ಸ್ಟೇಷನ್ ಎದುರು ಬಲ ತಿರುವು ಪಡೆದು ಕೈಕಂಬ ಕಡೆಗೆ ಸಂಚರಿಸಬೇಕು.

 ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಸರಿಸುವ ವಾಹನಗಳು ಕಟೀಲಿನಿಂದ ಬಜಪೆ ಚರ್ಚ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗು ಪಡೆದುಕೊಂಡು ಕೈಕಂಬ ರಸ್ತೆ, ಬಜಪೆ ಹಳೆ ಪೆÇಲೀಸ್ ಸ್ಟೇಷನ್ ಬಳಿ ಬಲಕ್ಕೆ ತಿರುಗಿ ಮುರ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಕಿನ್ನಿ ಪದವು ಜಂಕ್ಷನ್‍ಗೆ ಬಂದು ಸೇರುವುದು. 

ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೈಕಂಬದಿಂದ ಬಜಪೆ ಹಳೆ ಪೆÇಲೀಸ್ ಠಾಣೆಯ ಬಳಿ ಎಡಕ್ಕೆ ತಿರುಗು ಪಡೆದುಕೊಂಡು ಮುರ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಕಿನ್ನಿಪದವು ಜಂಕ್ಷನ್‍ಗೆ ಬಂದು ಸೇರಬೇಕು ಎಂದು ಆದೇಶಿಸಲಾಗಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter