ಅಜಿನಡ್ಕ ಶ್ರೀ ಗುರುರಾಘವೇಂದ್ರ ಜ್ಞಾನದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ
ಕೈಕಂಬ: ಅಜಿನಡ್ಕ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲದ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ಮತ್ತು ವರ್ಷಾವಧಿ ಉತ್ಸವವು ಏ.೩೦ರಿಂದ ಮೇ.೬ರ ಸೋಮವಾರದ ವರೆಗೆ ನಡೆಯಿತು.

ಏ.೩೦ರಂದು ಮಂಗಳವಾರ ತೋರಣ ಮುಹೂರ್ತ, ಸಂಜೆ ೫:೦೦ರಿಂದ ಭಜನಾ ಕಾರ್ಯಕ್ರಮ, ಸುದರ್ಶನ ಹೋಮ ನಡೆದು, ಮೇ.೨ರಂದು ಗುರುವಾರ ರಾಯರ ಬೃಂದಾವನ ಪ್ರತಿಷ್ಠೆ, ಆಂಜನೇಯ ಪ್ರತಿಷ್ಠೆ ನಡೆಯಿತು.

ಮೇ.೬ರಂದು ಸೋಮವಾರ ಗುರು ರಾಘವೇಂದ್ರ ಸ್ವಾಮಿಗೆ ಮತ್ತು ಪರಿವಾರ ದೇವರುಗಳಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು.

ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಮಾಣಿಲದ ಮೋಹನ್ದಾಸ್ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಗುರು ರಾಘವೇಂದ್ರ ಜ್ಞಾನದೇಗುಲದ ಅರ್ಚಕ ಹಾಗೂ ಆಡಳಿತ ಮೋಕ್ತೇಸರ ಶಂಕರಸ್ವಾಮಿ, ರಮೇಶ್ ಬೆಂಜನಪದವು, ಜನಾರ್ಧನ ಶಾಂತಿ, ವಿಜಯ್ ಮಾದುಕೋಡಿ, ವಿಜಯ್ ಬೆಂಜನಪದವು, ರಘು ಎಲ್. ಶೆಟ್ಟಿ, ರೂಪಶ್ರೀ ನಾರಾಯಣ್ ನಾಯ್ಕ್, ಬಿಜೇಶ್ ಚೌಟ, ರಮಾನಾಥ ರೈ, ಪದ್ಮರಾಜ್ ಆರ್., ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಸತೀಶ್ ಕುಂಪಲ, ಚೆನ್ನಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಗಂಗಾಧರ ಪೂಜಾರಿ ಕೊಪ್ಪಳ, ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸತ್ಯಜಿತ್ ಸುರತ್ಕಲ್, ಮುರಳಿ ಭಟ್ ಅನಂತಡ್ಕ, ಶರಣ್ ಪಂಪ್ವೆಲ್, ಭರತ್ ಕುಮ್ಡೇಲ್, ಗೋವಿಂದ ಪ್ರಭು, ನರಸಿಂಹ ಮಾಣಿ, ಸಂಜೀವ ಪೂಜಾರಿ ಬಿರ್ವ, ವೆಂಕಟೇಶ್ ನಾವಡ, ರಾಧಾಕೃಷ್ಣ ತಂತ್ರಿ, ಚಂದ್ರಹಾಸ ಪೂಜಾರಿ, ಪ್ರಕಾಶ್ ಆಳ್ವ, ಚಂದ್ರಹಾಸ ಪಲ್ಲಿಪಾಡಿ, ಕಿಶೋರ್ ಪಲ್ಲಿಪಾಡಿ, ಕಮಲಾಕ್ಷ ಪೂಜಾರಿ, ಉಮೇಶ್ ಸಾಲ್ಯಾನ್, ರೋಶನ್ ಪುಂಚಮೆ ಮತ್ತು ನಿಶಾಂತ್ ಪೂಜಾರಿ ಆಗಮಿಸಲಿದ್ದಾರೆ.
ಅದೇ ದಿನ ರಾತ್ರಿ ಕತ್ತಲೆ ಕಾಣದ ಗುಳಿಗನಿಗೆ ಕೋಲ ಸೇವೆ ನಡೆಯಿತು.