ಜ. ೩ರಿಂದ ೫ರವರೆಗೆ ಶ್ರೀ ವಜ್ರದೇಹಿ ಮಠದಲ್ಲಿ ʼವಜ್ರದೇಹಿ ಜಾತ್ರೆ’
ಕೈಕಂಬ: ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ ೩ರಿಂದ ೫ರವರೆಗೆ ಶ್ರೀ ರಾಜಶೇಖರಾನಂದ ಸ್ವಾಮಿ ಮುಂದಾಳತ್ವ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ʼವಜ್ರದೇಹಿ ಜಾತ್ರೆ’ ಜರುಗಲಿದೆ.

ಜ. ೩ರಂದು ಬೆಳಿಗ್ಗೆ ೬ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ದ್ವಾದಶ ನಾಳಿಕೇರ ಮಹಾ ಗಣಯಾಗ, ಉಗ್ರಾಣ ಮುಹೂರ್ತ, ಕೂರ್ಮ ಮಹಾ ಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾ ಸಾಲಿಗ್ರಾಮಕ್ಕೆ ಮಹಾಮಜ್ಜನ, ನವಕ ಕಲಶಾಭಿಷೇಕ, ಬೆಳಿಗ್ಗೆ ೧೦ರಿಂದ ಹರಿನಾಮ ಸಂಕೀರ್ತನೆ, ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ರಿಂದ ಕವಾಟ ಬಂಧನ, ರಾತ್ರಿ ೯ರಿಂದ ಪ್ರಶಾಂತ್ ಗುರುಪುರ ಸಾರಥ್ಯದ ಗುರುಪುರ ಗುರುದಯ ತಂಡದ ಕಲಾವಿದರಿಂದ ʼಅಮಸರ ಮಲ್ಪೊರ್ಚಿ‘ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಜ. ೪ರಂದು ಬೆಳಿಗ್ಗೆ ೧೦ಕ್ಕೆ ಶ್ರೀ ನಾಗ ದೇವರಿಗೆ ಪಂಚಾಮೃತಾಭಿಷೇಕ, ಪವಮಾನಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಶ್ರೀ ದೇವರ ಬಲಿ, ಪಲ್ಲಪೂಜೆ ಹಾಗೂ ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರದ ವಿಸ್ತೃತ ಕಟ್ಟಡ ಉದ್ಘಾಟನೆ, ಶ್ರೀ ವಜ್ರದೇಹಿ ಮಠದ ನಿರ್ಮಾಣಕ್ಕೆ ನಿಧಿ ಸಮರ್ಪಣೆ, ಮಧ್ಯಾಹ್ನ ೧೨ರಿಂದ ಧರ್ಮಸಭೆ ನಡೆಯಲಿದೆ.
ಶ್ರೀ ರಾಜಶೇಖರಾನಂದ ಸ್ವಾಮಿ ಅವರ ಸಾನಿಧ್ಯದಲ್ಲಿ ನಡೆಯುವ ಧರ್ಮಸಭೆಯಲ್ಲಿ ಗುರುಪುರ ಜಂಗಮ ಮಠದ ಸ್ವಾಮಿ, ಡಾ. ತೇಜಸ್ವಿನಿ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ. ಭರತ್ ಶೆಟ್ಟಿ, ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಗಾಯತ್ರಿ ಆರ್, ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಎ. ಸುವರ್ಣ, ರಾಕೇಶ್ ಶೆಟ್ಟಿ, ಅಶೋಕ ಚೌಟ ಕಡೆಂಜಗುತ್ತು ಪಾವೂರು, ರಾಮಣ್ಣ ಪಿ. ಶೆಟ್ಟಿ ಸಾಯಿನಿಧಿ ಕೋಟೆಕಾರ್ ಬೀರಿ, ರಾಮಣ್ಣ ಪೂಜಾರಿ ಆರ್ಚಾರ್ ಪಾಲ್ಗೊಳ್ಳುವರು.
ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಇವರಿಗೆ ಸನ್ಮಾನ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ ೨ರಿಂದ ʼಯಕ್ಷ ತೆಲಿಕೆ'ಹಾಗೂ ರಾತ್ರಿ ೯:೩೦ಕ್ಕೆ ಲಕುಮಿ ತಂಡದ ಕಲಾವಿದರಿಂದ
ʼಅವು ದಾಲಾಪುಜಿ‘ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಜ. ೫ರಂದು ಬೆಳಿಗ್ಗೆ ೧೧ ಗಂಟೆಗೆ ಧರ್ಮ ದೈವಗಳ ಭಂಡಾರ ಏರುವುದು, ಅನ್ನಸಂತರ್ಪಣೆ, ಸಂಜೆ ೫ಕ್ಕೆ ಧರ್ಮಮೂರ್ತಿ ಮೈಸಂದಾಯ ದೈವದ ನೇಮ, ರಾತ್ರಿ ೭:೩೦ರಿಂದ ವಿಠಲ ನಾಯಕ್ ವಿಟ್ಲ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ೧೦ರಿಂದ ಶ್ರೀ ರಕ್ತೇಶ್ವರಿ ಹಾಗೂ ಶ್ರೀ ಅಣ್ಣಪ್ಪ ದೈವದ ನೇಮ, ಧರ್ಮನುಡಿ, ಪ್ರಸಾದ ವಿತರಣೆ ಮತ್ತು ಭಂಡಾರ ನಿರ್ಗಮನವಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.